ಪಂಚಾಯ್ತಿಯನ್ನ ಬಾರ್
ಮಾಡಿಕೊಂಡು ಸದಸ್ಯರ ಅಂಧಾ ದರ್ಬಾರ ಆಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೆಂಡವಾಡ ಗ್ರಾಮ ಪಂ ನಲ್ಲಿ ನಡೆದಿದೆ.ಗ್ರಾಂ ಪಂ ಸದಸ್ಯ ಗುರುಪ್ರಸಾದ ಬೆನ್ನಾಳಿ ಮತ್ತು ನಂದಕುಮಾರ್ ಪೂಜೇರಿಯವರು ತಮ್ಮ ಚಟಕ್ಕೆ ಗ್ರಾಮ ಪಂಚಾಯಿತಿಯನ್ನು ದುರ್ಭಳಿಕೆ
ಮಾಡಿಕೊಂಡಿದ್ದಾರೆ. ನಿತ್ಯ ಸಾರಾಯಿ ಕುಡಿಯೋಕೆ
ಪಂಚಾಯ್ತಿಯನ್ನೆ ಬಳಸುವ ಕುಡುಕರು, ನಿನ್ನೆ
ಪಂಚಾಯ್ತಿಲ್ಲಿ ಕುಡಿಯುವಾಗ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಗ್ರಾಮಸ್ಥರಿಗೆ
ತಿಳಿಯುತ್ತಿದ್ದಂತೆ ಇಬ್ಬರು ವಾಟರ್ ಮನ್ ಹಾಗೂ
ಪಂಚಾಯ್ತಿ ಸದಸ್ಯರು ಪರಾರಿಯಾಗಿದ್ದಾರೆ, ಪಂಚಾಯ್ತಿ
ಸದಸ್ಯರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ರಾಯಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





