ಉಡುಪಿ:ಕುಂದಾಪುರದಿಂದ ಬ್ರಹ್ಮಾವರ ಕಡೆ ಅತೀ ವೇಗವಾಗಿ ಬರುತ್ತಿದ್ದ ಮಾರುತಿ ಈಕೊ ಕಾರು ಸಾಲಿಗ್ರಾಮ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮಾತನಾಡುತ್ತಿದ್ದ ಕಾರ್ಕಡ ಹಾಡಿಮನೆ ನಿವಾಸಿ ಚಂದ್ರ (46)ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮ್ರತಪಟ್ಟರೆ,ಇವರ ದೂರದ ಸಹೋದರ ನಾರಾಯಣ (50)ಗಂಭೀರ ಗಾಯಗೊಂಡ ಬ್ರಹ್ಮಾವರ ಮಹೇಶ್ ಆಸ್ಪತ್ರೆ ಗೆ ದಾಖಲಿಸಿದ್ದು, ಗಂಭೀರ ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆ ಗೆ ಮಣಿಪಾಲ ಆಸ್ಪತ್ರೆ ಗೆ ದಾಖಿಸಿದ್ದಾರೆ.ಅಪಘಾತವೆಸಗಿದ ಕಾರು ಚಾಲಕ ನೂರ್ ಅಹಮ್ಮದ್ ಸಾಲಿಗ್ರಾಮ ಅವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೋಟಾ ಠಾಣಾ ವ್ಯಾಪ್ತಿಯಲ್ಲಿ ಘಟನೆ.ಈ ಭಾಗದಲ್ಲಿ ಹಲವಾರು ಅಪಘಾತ ನಡೆದಿದ್ದು ಮುಖ್ಯರಸ್ತೆಯಾದ ಸಾಲಿಗ್ರಾಮದಲ್ಲಿ ಸರ್ವೀಸ್ ರೋಡ್ ಇಲ್ಲದಿರುವುದೇ ಅಪಘಾತ ಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





