ಮಂಡ್ಯ: ಮದ್ದೂರು ಕೆರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ 14 ಹಳ್ಳಿಗಳಿಗೆ ನೀರು ಒದಗಿಸಲು ಮದ್ದೂರು ಕೆರೆಯನ್ನು ಬಳಸಿ ಕೆರೆಯ ಸ್ವರೂಪವನ್ನು ಹಾಳುಗೆಡುವಿದ ಸರ್ಕಾರದ ನೀತಿಯನ್ನು ಖಂಡಿಸಿ ಇಂದು ಪ್ರತಿಭಟನೆ ಕೈಗೊಳ್ಳಲಾಯಿತು.ಮದ್ದೂರು ತಾಲೂಕಿನ ದೇಶಹಳ್ಳಿ,ಚಾಮನಹಳ್ಳಿ,ಶಿವಪುರ,ಮದ್ದೂರು,ಚನ್ನೇಗೌಡನದೊಡ್ಡಿ,ಗೊರವನಹಳ್ಳಿ,ಚನ್ನಸಂದ್ರ,ವೈದ್ಯನಾಥಪುರ,ನಗರೆಕೆರೆ,ಸೋಂಪುರ,ಮಾಲಗಾರನಹಳ್ಳಿ,ಅಜ್ಜಹಳ್ಳಿ,ಉಪ್ಪಿನಕೆರೆ,ತೊರೆಚಾಕನಹಳ್ಳಿ, ಇನ್ನು ಹಲವು ಗ್ರಾಮಗಳ ರೈತರು ತಮ್ಮ ಬೆಳೆಗಳಿಗೆ ಆಶ್ರಯಿಸಿದ್ದ ಮದ್ದೂರು ಕರೆಯ ನೀರನ್ನು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ಕೆರೆಯ ಸ್ವರುಪವನ್ನ ಕೆಡಿಸಿ ಕೆರೆ ಅಚ್ಚುಕಟ್ಟು ವ್ಯಾಪ್ತಿಯ 14 ಹಳ್ಳಿಗಳ ರೈತರ ಬದುಕನ್ನು ನಾಶ ಮಾಡಲು ಮುಂದಾಗಿರುವ ಸರ್ಕಾರದ ರೈತ ವಿರೋದಿ ಯೋಜನೆಯನ್ನು ವಿರೋದಿಸಿ ಉಗ್ರ ನರಸಿಂಹಸ್ವಾಮಿ ದೇವಸ್ಥಾನದಿಂದ ತಾಲ್ಲೂಕು ಕಛೇರಿಯ ವರಗೆ ಕಾಲ್ನಡಿಗೆಯ ಮುಖಾಂತರ ತೆರಳಿ ತಹಸಿಲ್ದಾರ್ ರವರ ಮುಖಾಂತರ ಮದ್ದೂರು ಕ್ಷೇತ್ರದ ಶಾಸಕರು,ಜಿಲ್ಲಾ ಉಸ್ತುವಾರಿ ಸಚಿವರು, ಮತ್ತು ಮುಖ್ಯ ಮಂತ್ರಿ ಗಳಿಗೆ ಈ ಯೋಜನೆಯನ್ನು ಕೈ ಬಿಡುವಂತೆ ಆಗ್ರಹಿಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





