Breaking News

ಹುತ್ತದ ಮೇಲೆ ಮೂಡಿದ ಶಿವ, ಪಾರ್ವತಿ ಹಾಗೂ ಗಣೇಶ.

ಹುಬ್ಬಳ್ಳಿ: ಪ್ರಕೃತಿಯ ಮಡಿಲಲ್ಲಿ ನಿತ್ಯ ಅಚ್ಚರಿ, ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅಂತದೇ ಒಂದು ಘಟನೆ ಕಲಘಟಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಕುರುವಿನಕೊಪ್ಪ ಗ್ರಾಮದ ಭೀಮಶಿ ಮಹದೇವಪ್ಪ ಗಾಯಕವಾಡ ಎಂಬುವವರ ಜಮೀನಲ್ಲಿರುವ ಹುತ್ತದ ಮೇಲೆ ಶಿವ, ಪಾರ್ವತಿ ಮತ್ತು ಗಣಪತಿ ಹೊಲುವ ಆಕೃತಿ ಮೂಡಿದೆ. ಈ ಆಕೃತಿಯನ್ನು ನೋಡಿದ ಗಾಯಕವಾಡ ಕುಟುಂಬದವರು ಅಚ್ಚರಿಗೊಂಡಿದ್ದಾರೆ.ಗಾಯಕವಾಡ ಕುಟುಂಬದವರು ತಮ್ಮ ಜಮೀನಿನಲ್ಲಿರುವ ಉಡಚಮ್ಮ ದೇವಿಗೆ ಪ್ರತಿ ಅಮವಾಸ್ಯೆ ಹಾಗೂ ಹುಣ್ಣುಮೆಯಂದು ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಆದ್ರೆ ಈ ಅಮವಾಸ್ಯೆಯ ಪೂಜೆ ಸಲ್ಲಿಸಲು ಹೋದಾಗ ಅಚ್ಚರಿಯನ್ನು ಕಂಡು ಪುಳಕಿತರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಹುತ್ತವಿದ್ದು, ನಾವು ಅಷ್ಟೊಂದು ಲಕ್ಷ್ಯಕೊಟ್ಟು ವೀಕ್ಷಣೆ ಮಾಡಿರಲಿಲ್ಲ. ಆದ್ರೆ ಈ ಬಾರಿ ಹುತ್ತದ ಮೇಲೆ ಕಾಣಿಸಿಕೊಂಡಿರುವ ಶಿವ, ಪಾವರ್ತಿ ಹಾಗೂ ಗಣೇಶ ಮೂರ್ತಿ ಆಶ್ಚರ್ಯ ತಂದಿದೆ ಎನ್ನುತ್ತಾರೆ. ವಿಷಯ ತಿಳಿಯುತ್ತಿದಂತೆ ಗ್ರಾಮಸ್ಥರು ಕೂಡ ಸ್ಥಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಫೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *