ದಾವಣಗೆರೆ : ಅತೃಪ್ತ ಶಾಸಕರೆಲ್ಲಾ ಸಗಣಿ ತಿಂದು ಮುಂಬೈ ಗೆ ಹೋಗಿದ್ದಾರೆ.ಅವರ್ಯಾರು ವಾಪಾಸ್ ಬರೋಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಬಿಜೆಪಿಯವರು ಹಾರ್ಸ್ ಟ್ರೇಡಿಂಗ್ ಮಾಡಿದ್ದಾರೆ.
ಒಬ್ಬೊಬ್ಬರಿಗೆ 25 , 30 ಕೋಟಿ ಕೊಟ್ಟಿದ್ದಾರೆ ಅಂತ ನಿನ್ನೆ ಸದನದಲ್ಲೆ ಹೇಳಿದ್ದೇವೆ. ಹೋದವರಿಗೆಲ್ಲಾ ಮಂತ್ರಿಗಿರಿ ಕೊಡೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.ಈ ಸಮ್ಮಿಶ್ರ ಸರ್ಕಾರದ ಅಳಿವು ಉಳಿವು ಸೋಮವಾರ ತಿಳಿಯುತ್ತೆ.ಬಿಜೆಪಿ ಸರ್ಕಾರ ಬಂದರೂ ಬಹಳ ದಿನ ಉಳಿಯಲ್ಲ. ನನ್ನನ್ನು ಯಾರೂ ರೆಸಾರ್ಟ್ ಗೆ ಕರೆದಿಲ್ಲ. ನಾನು ಹೋಗೋಲ್ಲ ಅಂತ ಗೊತ್ತು ಅದಕ್ಕೆ ಕರೆಯೋದಿಲ್ಲ ಎಂದರು. ರಾಜ್ಯಪಾಲರು ಸದನದ ನಿರ್ಣಯದಲ್ಲಿ ಮಧ್ಯಪ್ರವೇಶ ಮಾಡಬಾರದು ಅಂತ ಇದೆ ಎಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





