ಬೆಂಗಳೂರು: ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಮೇಯರ್ ಅಭ್ಯರ್ಥಿ ಆಯ್ಕೆ ಗೊಂದಲ ಕೊನೆಗೆ ಬಗೆಹರಿದಿದೆ. ಪಕ್ಷೇತರ ಪಾಲಿಕೆ ಸದಸ್ಯರು ಸೇರಿದಂತೆ, ರಾಮಲಿಂಗಾರೆಡ್ಡಿ ಬೆಂಬಲಿತ ಶಾಸಕರು ಗಂಗಾಂಬಿಕೆ ಪರ ಬ್ಯಾಟಿಂಗ್ ಮಾಡುತ್ತಿರುವುದರಿಂದ ಮೇಯರ್ ಪಟ್ಟ ಶಾಸಕ ರಾಮಲಿಂಗ ರೆಡ್ಡಿ ಬೆಂಬಲಿತ ಜಯನಗರ ಕಾರ್ಪೊರೇಟರ್ ಗಂಗಾಂಬಿಕೆಗೆ ಬಹುತೇಕ ಖಚಿತ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೆಸರನ್ನು ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಎರಡನೇ ಬಾರಿಯೂ ಶಾಂತಿನಗರ ವಾರ್ಡ್ ಕಾರ್ಪೋರೇಟರ್ ಸೌಮ್ಯ ಶಿವಕುಮಾರ್ ಅವರಿಗೆ ಮೇಯರ್ ಸ್ಥಾನ ತಪ್ಪಿದೆ. ಇದರಿಂದ ಡಿಸಿಎಂ ಪರಮೇಶ್ವರ್ಗೆ ಮುಖಭಂಗವಾಗಿದ್ದು, ಶಾಸಕ ರಾಮಲಿಂಗ ರೆಡ್ಡಿ ಮೇಲುಗೈ ಸಾಧಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





