Breaking News

ಸರ್ಜಾ ವಿರುದ್ಧ ಆರೋಪ ಮಾಡಲೆಂದೇ ಕೇಸ್ ದಾಖಲು: ವಕೀಲ ಶ್ಯಾಮ್​ ಸುಂದರ್​..

ಬೆಂಗಳೂರು: ಭಜನ್ ಲಾಲ್ ಕೇಸ್ ಅನ್ನು ಸರ್ವೊಚ್ಛ ನ್ಯಾಯಾಲಯದ ಆದೇಶದಂತೆ ರದ್ದುಗೊಳಿಸಲಾಗಿತ್ತು. ಈ ಕೇಸ್​ ಕೂಡಾ ಅಂತಹದ್ದೇ. ಸರ್ಜಾ ವಿರುದ್ಧ ಆರೋಪ ಮಾಡಲೆಂದೇ ಈ ಕೇಸ್ ದಾಖಲಿಸಲಾಗಿದೆ ಅಂತಾ ಅರ್ಜುನ್ ಸರ್ಜಾ ಪರ ವಕೀಲ ಶ್ಯಾಮ್ ಸುಂದರ್ ಅಭಿಪ್ರಾಯ ಪಟ್ಟಿದ್ದಾರೆ.ಹೈಕೋರ್ಟ್‌ನಲ್ಲಿ ಎಫ್ಐಆರ್‌ ರದ್ದು ಕೋರಿ ಸಲ್ಲಿಸಿರುವ ವಿಚಾರಣೆ ಮುಗಿದ ಬಳಿಕ ಮಾತನಾಡಿದ ಅವರು, ಶೃತಿ‌ಹರಿಹರನ್ ‌ಸಲ್ಲಿಸಿರುವ ದೂರು ಕಾನೂನು ವಿರುದ್ಧವಾಗಿದೆ. ಹಗೆತನದದ್ದಾಗಿದೆ ಅನ್ನೋದನ್ನು ಎಳೆಎಳೆಯಾಗಿ ವಕೀಲ ಬಿ.ವಿ ಆಚಾರ್ಯ‌ ಅವರು ನ್ಯಾಯಾಮೂರ್ತಿಗಳಿಗೆ ಮನವರಿಕೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಲಾದ‌ ಅಂಶಗಳಿಗೂ, ಎಫ್​ಐಆರ್​ನಲ್ಲಿ ‌ದಾಖಲಿಸಲಾದ ಅಂಶಗಳ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ ಅನ್ನೋದನ್ನು ಮನವರಿಕೆ ಮಾಡಿದ್ದೇವೆ ಅಂತಾ ತಿಳಿಸಿದರು. ಅಲ್ಲದೇ, ಈ ಕೇಸ್​ 3 ವರ್ಷ ಹಳೆಯದ್ದಾಗಿದೆ. ಈ ಹಿನ್ನೆಲೆ ಸರ್ಜಾರನ್ನು‌ ಬಂಧಿಸಬಾರದು ಅಂತ‌ ಕೋರ್ಟ್ ಕೂಡಾ ಆದೇಶಿಸಿದೆ ಅಂತಾ ಹೇಳಿದರು.

Share News

About Shaikh BIG TV NEWS, Hubballi

Check Also

Featured Video Play Icon

ನೇಹಾ ಕೊಲೆ ಪ್ರಕರಣ ಸಿಐಡಿಗೆ: ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ನಿರಂಜನಯ್ಯ ಹಿರೇಮಠ…

ಹುಬ್ಬಳ್ಳಿ:ನೇಹಾ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ‌ ಕುಟುಂಬದ ಹಾಗೂ ಎಲ್ಲ ಹೋರಾಟಗಾರರ ಒತ್ತಡಕ್ಕೆ …

Leave a Reply

Your email address will not be published. Required fields are marked *

You cannot copy content of this page