ಬೆಂಗಳೂರು: ರಾಜ್ಯದಿಂದ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದವರ ಪೈಕಿ ಕೆಲವರು ಭಾನುವಾರ ಅಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಅಸುನೀಗಿದ್ದರು. ಕೆ. ಹನುಮಂತರಾಯಪ್ಪ, ಕೆ.ಎಂ ಲಕ್ಷ್ಮೀನಾರಾಯಣ, ಎಂ.ರಂಗಪ್ಪ, ಲಕ್ಷ್ಮಣ್ ಗೌಡ ರಮೇಶ್, ನಾಗರಾಜ್ ರೆಡ್ಡಿ, ಎಚ್ ಶಿವಕುಮಾರ್, ಎ.ಮಾರೇಗೌಡ, ಎಚ್.ಪುಟ್ಟರಾಜು ಹಾಗೂನಾರಾಯಣ್ ಚಂದ್ರಶೇಖರ್-ರೆಮುರಾಯ್ ತುಳಸಿರಾಮ್ ಎಂಬಿಬ್ಬರು ಮೃತಪಟ್ಟಿದ್ದರು. ಅವರ ವಿವರ ಇದೀಗ ಲಭ್ಯವಾಗಿದೆ. ಮೃತರ ವಿವರ ಇಲ್ಲಿದೆ:ಕೆ. ಹನುಮಂತರಾಯಪ್ಪ: ಕಾಚನಹಳ್ಳಿ ನಿವಾಸಿಯಾಗಿದ್ದ ಹನುಮಂತರಾಯಪ್ಪ ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಾಧ್ಯಕ್ಷ ಮತ್ತು ನೆಲಮಂಗಲದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು.ಕೆ.ಎಂ ಲಕ್ಷ್ಮೀನಾರಾಯಣ: ಕಾಚನಹಳ್ಳಿ ನಿವಾಸಿಯಾಗಿದ್ದ ಕೆ.ಎಂ ಲಕ್ಷ್ಮೀನಾರಾಯಣ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಾಗಿದ್ದರು.ಎಂ.ರಂಗಪ್ಪ: ಜೆಡಿಎಸ್ ಕಾರ್ಯಕರ್ತನಾಗಿದ್ದ ರಂಗಪ್ಪ, ದಾಸರಹಳ್ಳಿ ಬೂತ್ ಸಮಿತಿಯ ಅಧ್ಯಕ್ಷರೂ ಆಗಿದ್ದರು.ಲಕ್ಷ್ಮಣ್ ಗೌಡ ರಮೇಶ್: ತುಮಕೂರು ಮೂಲದ ಉದ್ಯಮಿ, ಎಸ್ಎಸ್ ರೋಡ್ ನಿವಾಸಿ.ನಾಗರಾಜ್ ರೆಡ್ಡಿ: ಬಿಟಿಎಂ ಲೇಔಟ್ ನಿವಾಸಿಯಾಗಿದ್ದ ನಾಗರಾಜ್ ರೆಡ್ಡಿ, ಟೈಲ್ಸ್ ಉದ್ಯಮಿ ಹಾಗೂ ಶಾಸಕ ರಾಮಲಿಂಗಾ ರೆಡ್ಡಿ ಆಪ್ತರಾಗಿದ್ದರು.ಎಚ್ ಶಿವಕುಮಾರ್: ನೆಲಮಂಗಲದ ಗೋವಿಂದಪ್ಪ ಲೇಔಟ್ ನಿವಾಸಿಯಾಗಿದ್ದ ಇವರು ನೆಲಮಂಗಲದ ಹರ್ಷ ಆಸ್ಪತ್ರೆಯ ಪಾಲುದಾರರು.ಎ.ಮಾರೇಗೌಡ: ಅಡಕಮಾರನಹಳ್ಳಿ ನಿವಾಸಿಯಾಗಿದ್ದ ಮಾರೇಗೌಡ, ಜೆಡಿಎಸ್ ಕಾರ್ಯಕರ್ತ ಹಾಗೂ ಜೆಡಿಎಸ್ ನಾಯಕ ಇ.ಕೃಷ್ಣಪ್ಪ ಬೆಂಬಲಿಗ.ಎಚ್.ಪುಟ್ಟರಾಜು: ಹಾರೋಕ್ಯಾತನಹಳ್ಳಿ ನಿವಾಸಿಯಾಗಿದ್ದ ಪುಟ್ಟರಾಜು, ಎ.ಮಾರೇಗೌಡರ ಆಪ್ತ ಸ್ನೇಹಿತರಾಗಿದ್ದರು. ಪುಟ್ಟರಾಜು ಸಹ ಇ.ಕೃಷ್ಣಪ್ಪರ ಬೆಂಬಲಿಗ.ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿರುವುದಾಗಿ ದೃಢಪಟ್ಟ ಇನ್ನಿಬ್ಬರು ನಾರಾಯಣ್ ಚಂದ್ರಶೇಖರ್ ಹಾಗೂ ರೆಮುರಾಯ್ ತುಳಸಿರಾಮ್ ಎಂದು ತಿಳಿದುಬಂದಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





