Breaking News

ಮೂರ್ತಿಯ ಹಣೆಯಲ್ಲಿ ಅಪಾರ ಸಂಪತಿನ‌ ಆಸೆಗೆ ಧ್ವಂಸ.

ಬೂದನಗುಡ್ಡ ಬಸವೇಶ್ವರ ಮೂರ್ತಿ ಭಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮಣ ಚಂಡೂನವರ್, ಲಾಲಸಾಬ್ ಬಾವಿ, ಮಹಾಂತೇಶ ಮಾಳಗಿ, ಶಿವರಾಜ್ ಜೀವಕನವರ್, ನಾಗರಾಜ್ ಚೌಡಣವರ್, ಸಿದ್ದರಾಮ ಮರದಣವರ್, ರವಿ‌ ಕೊಳೂರ್, ಮಂಜುನಾಥ ಮೊಸಳಣವರ್ ಎಂಬುವವರನ್ನು ಬಂಧಿಸಿದ್ದಾರೆ. ಮೇ 28 ರಂದು ಆರೋಪಿಗಳು ಬೂದನಗುಡ್ಡದ ಬಸವೇಶ್ವರ ಮೂರ್ತಿಯನ್ನು ಭಗ್ನಗೊಳಿಸಿ ಪರಾರಿಯಾಗಿದ್ದರು. ಆರೋಪಿತರನ್ನು ಬಂಧಿಸಿ ವಿಚಾರಣೆ ನಡೆಸಿದಾಗಿ, ಬಸವವೇಶ್ವರ ಮೂರ್ತಿಯ ಹಣೆಯಲ್ಲೊ ಅಪಾರ ಪ್ರಮಾಣದ ಬೆಲೆಬಾಳುವ ಹವಳದ ವಜ್ರ, ಮುತ್ತು ಇವೆ. ಅವುಗಳನ್ನು ಕಳವು ಮಾಡಬೇಕು ಎಂಬ ಮೂಢನಂಬಿಕೆಯಿಂದ ಈ ಕೃತ್ಯ ಎಸಗಿದ್ದಾಗಿ‌ ಒಪ್ಪಿಕೊಂಡಿದ್ದು, ಆರೋಪಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.

Share News

About Shaikh BIG TV NEWS, Hubballi

Check Also

ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೈಕಾಲು ಕಟ್ಟಿ, ಕತ್ತು ಕುಯ್ದ ಪುತ್ರ

ಮದ್ಯ ಸೇವನೆಗೆ ಹಣ ನೀಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೈಕಾಲು ಕಟ್ಟಿ ಹಾಕಿ, ಕತ್ತು ಕುಯ್ದು ಕೊಲೆ ಮಾಡಿದ ದಾರುಣ ಘಟನೆ …

Leave a Reply

Your email address will not be published. Required fields are marked *