ಕಾರವಾರ: ಅದು ನದಿಯಂಚಿನ ಪುಟ್ಟ ಗ್ರಾಮ. ಮಳೆಗಾಲದಲ್ಲಿ ಹೊರ ಊರಿನ ಸಂಪರ್ಕ ಕಳೆದುಕೊಳ್ಳುವ ಈ ಗ್ರಾಮಸ್ಥರ ಯಾತನೆ ಯಾರಿಗೂ ಬೇಡವೇ ಬೇಡ. ತುಂಬಿ ಹರಿಯುವ ಹಳ್ಳದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಇದ್ದೂ ಇಲ್ಲದಂತಾಗಿದೆ.
ಹೌದು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳು ಕಳೆದರೂ ಕೂಡ ಕೆಲ ಹಳ್ಳಿಗಳು ಕನಿಷ್ಠ ಮೂಲ ಸೌಕರ್ಯವಿಲ್ಲದೇ ಪರದಾಡುತ್ತಿವೆ. ಇದಕ್ಕೆ ನೈಜ ಉದಾಹರಣೆ ಅಂದ್ರೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮ.ಹೊಸಾಕುಳಿ ಗ್ರಾಮಸ್ಥರು ಸೇತುವೆ ಇಲ್ಲದೇ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿರುವ ಹಳ್ಳ ತುಂಬಿ ಹರಿಯುವ ಕಾರಣ ಗ್ರಾಮಸ್ಥರಿಗೆ ಪ್ರತಿ ಮಳೆಗಾಲದಲ್ಲಿ ಹೊರ ಊರಿನ ಸಂಪರ್ಕ ಕಡಿತಗೊಳ್ಳುತ್ತದೆ. ಸಣ್ಣ ಮಳೆ ಬಂದರೂ ತುಂಬಿ ಹರಿಯುವ ಹಳ್ಳಕ್ಕೆ ಯಾವುದೇ ಸೇತುವೆ ಇಲ್ಲ. ಪರಿಣಾಮ ಗ್ರಾಮಸ್ಥರು ಹಳ್ಳದ ನೀರಿನಲ್ಲೇ ಸರ್ಕಸ್ ಮಾಡಿ ದಾಟಬೇಕಾದ ಅನಿವಾರ್ಯತೆ ಎದುರಾಗಿದೆ