ಧಾರವಾಡ: ಆಕಾಶವಾಣಿಯ ವಸತಿ ಗೃಹಗಳಿಗೆ ಕಳ್ಳರು ಬೀಗ ಜಡಿದ ಘಟನೆ ಮಧ್ಯರಾತ್ರಿ ನಡೆದಿದೆ. ಆಕಾಶವಾಣಿ ಕ್ವಾರ್ಟರ್ಸನಲ್ಲಿನ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕೃತ್ಯ 8 ಮನೆಗಳಿಗೆ ಬೀಗ ಹಾಕಿದ್ದಾರೆ.
ದರೋಡೆ ಮಾಡಲು ಬಂದವರಿಂದ ನಡೆದ ಕೃತ್ಯ ನಡೆದಿದೆ ಎನ್ನುವ ಸಂಶಯ ಪೊಲೀಸರದ್ದಾಗಿದೆ.ಮನೆಯಿಂದ ಇಂದು ಹೊರಗೆ ಬಾರದೆ ಆಕಾಶವಾಣಿ ಸಿಬ್ಬಂದಿ ಪರಿತಪಿಸಿದ ಘಟನೆ ನಡೆಯಿತು. ಒಳಗಿನಿಂದ ಬಾಗಿಲು ತೆರೆಯಲು ಬಾರದಿದ್ದಾಗ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಮನೆಗೆ ಬೀಗ ಹಾಕಿ ಊರಿಗೆ ಹೋಗಿರಬೇಕೆಂದು ತಿಳಿದಿದ್ದ ಅಕ್ಕಪಕ್ಕದ ಮನೆಯವರು ಭಾವಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಘಟನಾ ಸ್ಥಳಕ್ಕೆ ಉಪನಗರ ಪೊಲೀಸ್ ಠಾಣೆಯವರು ಬೇಟಿನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

