ಹುಬ್ಬಳ್ಳಿ: ಮಹಾಮಾರಿ ಕರೋನಾ ಸಮಯದಲ್ಲಿ ಸರ್ವ ಜನಾಂಗ ಶಾಂತಿ, ಸೌಹಾರ್ದಯುತವಾಗಿ ಬದಕಿಲು ಸಂದೇಶ ಮತ್ತು ಪ್ರೀತಿ ದಾರಿ ಎರೆಯುವ ಸಲುವಾಗಿ ಕಾವ್ಯ ಕಸ್ತೂರಿ ಕವನ ಸಂಕಲನ ರಚನೆ ಮಾಡಿದ್ದೇನೆ ಎಂದು ಪರಿಸರ ಹಾಗೂ ಸಾಮಾಜಿಕ ಸಾಮರಸ್ಯ ರಾಯಭಾರಿ ಕವಿ. ಮೆಹರುನ್ನಿಸಾ ಶೇಖ್ ಹೇಳಿದರು.
ನಗರದ ಫಾರೆಸ್ಟ್ ಕಾಲೋನಿಯಲ್ಲಿ ತಮ್ಮ ನಿವಾಸಿದಲ್ಲಿ ಕಾವ್ಯ ಕಸ್ತೂರಿ ಕವನ ಸಂಕಲನ ಕುರಿತು ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮತ್ತು ಅರಣ್ಯ ಅಭಿವೃದ್ಧಿ ವಿಷಯದಲ್ಲಿ ಹೊಂದಿರುವ ಪ್ರೀತಿ ನನಗೆ ಜನಸಾಮಾನ್ಯರ ಪ್ರೀತಿ, ಅವರ ನೆಮ್ಮದಿ ಬದುಕಿನ ಮೇಲೆ ಅಪಾರ ಕಳಕಳಿ ಇದೆ. ಕನ್ನಡದಲ್ಲಿ ಬರೆಯುವುದು
ನನಗೆ ಅತ್ಯಂತ ಸಂತಸ ಎಂದ ಮಹಮ್ಮದ್ ಹುಸೇನ್ ಆಧಮ್ ಶೇಖ್ ರವರು ನಾನು ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು ಕೇಂದ್ರ ಸರಕಾರದ ಆಹ್ವಾನದ ಮೇರೆಗೆ ಡೆಹ್ರಾಡೂನಿನ “ಇಂದಿರಾಗಾಂಧಿ ನ್ಯಾಷನಲ್ ಫಾರೆಸ್ಟ್ ಅಕಾಡೆಮಿ”ಯಲ್ಲಿ ಸಹ ಪ್ರಾಧ್ಯಾಪಕರಾಗಿ ಸಹ ಸೇವೆ ಸಲ್ಲಿಸಿದ್ದೇನೆ.
ಉರ್ದು ನನ್ನ ಮಾತೃಭಾಷೆ ಆದರು ಕನ್ನಡ ಅವರ ಪ್ರೀತಿಯ ಭಾಷೆಯಾಗಿದೆ. ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕವನ ಸಂಕಲನ ಹೊರತರಲು ಚಿಂತನೆ ಮಾಡಿದೆ ಎಂದರು
bigtvnews | Hubli Dharwad News | Kannada News | Karnataka News Hubli News | News In Hubli | Local news

