ಧಾರವಾಡ : ಮೆಹಬೂಬ್ ನಗರದ ಗಾದಿ ಕಾರ್ಖಾನೆಯ ಬಳಿ ಬ್ಯಾನರ್ನಲ್ಲಿ ಹಾಕಲಾಗಿದ್ದ ಫೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆಯಲ್ಲಿ 14 ಜನರ ವಿರುದ್ಧ ದೂರು ದಾಖಲಾಗಿದೆ
ಧಾರವಾಡದ ಫೈರೋಜ್ ಪಠಾಣ್ , ಅಬ್ದುಲ್ ದೇಸಾಯಿ , ಮೈನುದ್ದೀನ್ ನದಾಫ್ , ತೌಸಿಫ್ ಶೇಖ್ , ಕೃಷ್ಣಾ ಗುಮ್ಮಗೋಳ , ಅಜ್ಜರ್ ಮುಲ್ಲಾ , ಇಟ್ಬಾಲ್ ತಮಟಗಾರ , ಅಲ್ತಾಫ್ ತಮಟಗಾರ , ಜಾವೇದ್ ತಮಟಗಾರ , ಶಮೀನ್ ಕಾಟೇವಾಡೆ , ಅಬ್ಬಾಸ್ ಮುಲ್ಲಾ , ವರುಣ ಸಮಾಣಿ , ಸಿದ್ದಯ್ಯ ಭಾವಿಮಠದ , ಸಮೀವುಲ್ಲಾ ಬಳ್ಳಾರಿ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ . ಧಾರವಾಡದ ಮೆಹಬೂಬ್ ನಗರ ಕಾದಿ ಕಾರ್ಖಾನೆ ಬಳಿ ಹಾಕಲಾಗಿದ್ದ ಬ್ಯಾನರ್ನಲ್ಲಿ ಫೋಟೋ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ . ಅಲ್ಲದೇ ಈ ಮೊದಲು ಫೋನ್ನಲ್ಲಿಯೂ ಪರಸ್ಪರ ಬೈದಾಡಿಕೊಂಡಿದ್ದರು . ಮೇ .12 ರಂದು ಮೆಹಬೂಬ್ ನಗರದ ಸೋನಾಪುರದಲ್ಲಿನ ಫೈರೋಜ್ ಪಠಾಣ್ ಎಂಬುವವರ ಮನೆ ಎದುರು ಎರಡೂ ಗುಂಪಿನ ಯುವಕರು ಸೇರಿ ಗಲಾಟೆ ಮಾಡಿದ್ದಾರೆ
ಈ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಉಪನಗರ ಠಾಣೆ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ ಅವರು ಘಟನೆ ಕುರಿತು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

