ಕುಂದಗೋಳ : ಕಳೆದ ಐವತ್ತು ವರ್ಷಗಳಿಂದ ಅಭಿವೃದ್ಧಿ ಕಾಣದ ರಸ್ತೆ ದುರಸ್ತಿಗಾಗಿ ಇಲ್ಲೊಂದು ಗ್ರಾಮದ ಗ್ರಾಮಸ್ಥರು ಕೈಗೊಂಡ ಉಪವಾಸ ಸತ್ಯಾಗ್ರಹದ ನಿರ್ಧಾರಕ್ಕೆ ಕೊನೆಗೂ ಜಯ ಸಿಕ್ಕಿದೆ . ಈಗ ರಸ್ತೆ ಅಭಿವೃದ್ಧಿ ಕಾರ್ಯ ಆರಂಭವಾಗಿದೆ

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಿಂದ ಯರಿನಾರಾಯಣಪೂರಕ್ಕೆ ಸಂಪರ್ಕ ಕಲ್ಪಿಸುವ ಮೂಲಕ 3 ಕಿಲೋ ಮೀಟರ್ ರಸ್ತೆಯ ಕಥೆ ಇದು . ಅವಳಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯ ತಾಲೂಕು ಆಡಳಿತ , ಶಾಸಕ , ಸಂಸದ ಹಾಗೂ ಸಚಿವರಿಗೆ ಮನವಿ ನೀಡಿ ಕೊನೆಗೆ ಉಪವಾಸ ಸತ್ಯಾಗ್ರಹದ ನಿರ್ಧಾರ ಕೈಗೊಮಡಿದ್ದರು . ಈ ಬಗ್ಗೆ ಪಬ್ಲಿಕ್ ನೆಕ್ಸ್ ಬೆಳಕು ಚೆಲ್ಲಿ ರಸ್ತೆ ಅವ್ಯವಸ್ಥೆಯಿಂದ ಜನರು ಅನುಭವಿಸುತ್ತಿರುವ ಪರಿಸ್ಥಿತಿ ಬಗ್ಗೆ ಸತತ ವರದಿ ಪ್ರಕಟಿಸಿತ್ತು . ನಿವ ಇದೀಗ ಗ್ರಾಮಸ್ಥರ ಹೋರಾಟದ ಗುಡೇನಕಟ್ಟಿ ಯರಿನಾರಯಣಪುರಕ್ಕೆ ಜಿಲ್ಲಾ ಪಂಚಾಯತ್ ಉದ್ಯೋಗ ಖಾತ್ರಿ ಯೋಜನೆಯಡಿ 25 ಲಕ್ಷ ರೂಪಾಯಿ ಒದಗಿದ್ದು ಗ್ರಾಮಸ್ಥರು ಅಷ್ಟೇ ಖುಷಿಯಿಂದ ಕಾಮಗಾರಿ ಆರಂಭಿಸಿದ್ದಾರೆ .
ಒಟ್ಟಾರೆ ಕೃಷಿ ಚಟುವಟಿಕೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ , ತಹಶೀಲ್ದಾರ ಕಚೇರಿ ಇತರೆ ಕೆಲಸಗಳಿಗೆ ಸಮರ್ಪಕ ರಸ್ತೆ ಇಲ್ಲದೆ ಬೇರೆ ಮಾರ್ಗದಲ್ಲಿ ತೆರಳುತ್ತಿದ್ದ ಗುಡೇನಕಟ್ಟಿ ಯರಿನಾರಣಪೂರ ಜನತೆಗೆ ಕಷ್ಟ ದೂರವಾಗಿ ರಸ್ತೆ ಕಾಮಗಾರಿ ಭರದಿಂದ ಸಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

