ಹುಬ್ಬಳ್ಳಿ : ರಾಜಸ್ಥಾನದ ಉದಯಪುರದ ಹತ್ಯೆ ಪ್ರಕರಣವು
ಕನ್ಹಯ್ಯ ಲಾಲ್ ಶಿರಚ್ಛೇದನ ಪ್ರಕರಣ ಅಮಾನವೀಯವಾಗಿದೆ. ಹಾಡಹಗಲೇ ಈ ರೀತಿ ಭೀಕರ ಕಗ್ಗೊಲೆ ಮಾಡಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ವಕ್ತಾರೆ ತೇಜಸ್ವಿನಿ ಗೌಡ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಇದೊಂದು ಅಮಾನವೀಯ ಘಟನೆ. ನೂಪುರ ಶರ್ಮಾರನ್ನು ಬೆಂಬಲಿಸಿ ಸಂದೇಶ ಹಾಕಿದ್ದಕ್ಕೆ ಈ ರೀತಿಯ ಕೃತ್ಯವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿರೋ ರಾಜಾಸ್ತಾನದಲ್ಲಿ ಈ ಘಟನೆ ನಡೆದಿದೆ. ಆದ್ರೆ ಕೇಂದ್ರದಲ್ಲಿರೊ ಬಿಜೆಪಿ ಸರ್ಕಾರ ಇದನ್ನು ಸಹಿಸೋದಿಲ್ಲ. ಕೇಂದ್ರ ಸರ್ಕಾರ ಇದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ. ಈ ರೀತಿ ಕಾನೂನು ಕೈಗೆತ್ತಿಕೊಂಡು ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಖಚಿತ.ಪ್ರತ್ಯೇಕ ರಾಜ್ಯದ ಕೂಗು ವಿಚಾರ, ಪ್ರತ್ಯೇಕ ರಾಜ್ಯದ ಕೂಗಿಗೆ ನಮ್ಮ ಬೆಂಬಲವಿಲ್ಲ. ನಾವು ರಾಜ್ಯವನ್ನ ಒಡೆಯುವವರಲ್ಲ ಒಂದು ಮಾಡುವವರು.ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಗೊಂದಲ ವಿಚಾರ ಬಿಜೆಪಿ ಸರ್ಕಾರ ಎಂದೂ ಸಹ ಇದನ್ನ ಸಮರ್ಥಿಸಿಕೊಂಡಿಲ್ಲ. ಲೋಪದೋಷ ಕಂಡುಬಂದ ಬಗ್ಗೆ ಸರಿಪಡಿಸುವ ಕೆಲಸ ನಡೆದಿದೆ ಪಠ್ಯ ಪುಸ್ತಕ ವಿವಾದಕ್ಕೆ ಸದ್ಯಕ್ಕೆ ತೆರೆಬಿದ್ದಿದೆ ಎಂದರು.