Breaking News

ನನಗೆ 75 ವರ್ಷ ತುಂಬುತ್ತಿದೆ ಅದಕ್ಕೆ ಈ ಕಾರ್ಯಕ್ರಮ. ಇದು ನನ್ನ‌ ಸ್ನೇಹಿತರು ಮಾಡ್ತಿರುವ ವಿಶೇಷವಾದ ಕಾರ್ಯಕ್ರಮ


ಬೆಂಗಳೂರು: ದಾವಣಗೆರೆಯಲ್ಲಿ ಆಯೋಜಿಸಿರುವ ತಮ್ಮ ಕುರಿತಾದ ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ನನಗೆ 75 ವರ್ಷ ತುಂಬುತ್ತಿದೆ ಅದಕ್ಕೆ ಈ ಕಾರ್ಯಕ್ರಮ. ಇದು ನನ್ನ‌ ಸ್ನೇಹಿತರು ಮಾಡ್ತಿರುವ ವಿಶೇಷವಾದ ಕಾರ್ಯಕ್ರಮ. ಯಡಿಯೂರಪ್ಪ 77ನೇ ಬರ್ತ್ ಡೇ ಮಾಡಿಕೊಂಡರು. ನಾನು ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ. ಯಡಿಯೂರಪ್ಪ ಯಾಕೆ ಬರ್ತ್​​​ಡೇ ಮಾಡಿಕೊಂಡರು? 75ನೇ ವರ್ಷ ಅಮೃತ ಮಹೋತ್ಸವ ಇದ್ದಂತೆ. ಅದಕ್ಕೆ ನಮ್ಮ‌ ಸ್ನೇಹಿತರು, ಅಭಿಮಾನಿಗಳು‌ ಮಾಡ್ತಿದ್ದಾರೆ. ನಾನೂ ಇದನ್ನ ಒಪ್ಪಿಕೊಂಡಿದ್ದೇನೆ ಎಂದ ಸಿದ್ದರಾಮಯ್ಯ ಅವರು ಇದು ನನ್ನ ಶಕ್ತಿ ಪ್ರದರ್ಶನವಲ್ಲ ಎಂದಿದ್ದಾರೆ.

ನಾನು ರಾಜಕೀಯಕ್ಕೆ ಬಂದಿದ್ದು 1984 ರಲ್ಲಿ. ಇದೊಂದು ಜೀವನದಲ್ಲಿ ಮೈಲಿಗಲ್ಲು. ಅದಕ್ಕಾಗಿ ನಾನು ಒಪ್ಪಿಕೊಂಡಿದ್ದೇನೆ. ಹೊಟ್ಟೆಕಿಚ್ಚಿನಿಂದ ಅವರು ಮಾಡಿಕೊಳ್ತಿದ್ದಾರೆ. ಅಶೋಕ್ ದೊಡ್ಡ ದೊಡ್ಡ ಜಾಹಿರಾತು ಕೊಟ್ಟಿದ್ರಲ್ಲ. ಅದರ ಬಗ್ಗೆ ನೀವು ಕೇಳ್ರಪ್ಪ. ನನ್ನ ಹುಟ್ಟುಹಬ್ಬಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಸೇರಿದಂತೆ ಎಲ್ಲಾ ರಾಜ್ಯದ ನಾಯಕರು ಬರ್ತಾರೆ. ನಾನು ಬಿಜೆಪಿಯವರನ್ನ ಕರೆದಿಲ್ಲ, ನಾನ್ಯಾಕೆ ಅವರನ್ನ ಕರೆಯಲಿ? ದೇಶಪಾಂಡೆ ಒಂದು ಕಮಿಟಿ ಮಾಡಿಕೊಂಡಿದ್ದಾರೆ. ಅವರು ಬೇಕಾದರೇ ಕರೆಯಬಹುದು ಎಂದು ಸಿದ್ದರಾಮಯ್ಯ ಸೂಕ್ಷ್ಮವಾಗಿ ಹೇಳಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *