ಯಲ್ಲಾಪುರ : ಇಲ್ಲಿನ ಹಳಿಯಾಳ- ಯಲ್ಲಾಪುರ ರಾಜ್ಯ ಹೆದ್ದಾರಿಯ ತಟ್ಟಿಹಳ್ಳ ಮತ್ತು ತಾಟವಾಳ ಮಧ್ಯೆ ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಗುರುವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ .
ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮದ ನಿವಾಸಿ ಪೀಟರ್ ಹಂಡಿ ( 26 ) ಮೃತಪಟ್ಟವರು . ಅವರು ದಾಂಡೇಲಿಯ ಕಾಗದ ಕಾರ್ಖಾನೆಯ ನೌಕರನಾಗಿದ್ದು ಎಂದಿನಂತೆ ತಮ್ಮ ಬೈಕ್ ಮೂಲಕ ಕರ್ತವ್ಯಕ್ಕೆಂದು ದಾಂಡೇಲಿಗೆ ಬರುವ ಸಂದರ್ಭದಲ್ಲಿ ತಾಟವಾಳ ಸಮೀಪದ ಕಿರವತ್ತಿ ಕ್ರಾಸ್ನ ಚೆಕ್ ಪೋಸ್ಟ್ ಸಮೀಪ ಈ ಘಟನೆ ಸಂಭವಿಸಿದೆ . ಘಟನಾ ಸ್ಥಳಕ್ಕೆ ಹಳಿಯಾಳ ಪಿಎಸ್ ಐ ಶಿವಾನಂದ ನಾವದಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





