ಬೆಂಗಳೂರು: ಎಲ್ಲ ಸಂಬಂಧಗಳು ಹುಟ್ಟಿದ ನಂತರ. ತಾಯಿ ಸಂಬಂಧ ಮಾತ್ರ ಭೂಮಿಗೆ ಬರುವ ಮುನ್ನಾ ಇರುತ್ತೆ. ತಂದೆ, ತಮ್ಮ, ಅಣ್ಣ ಎಲ್ಲವೂ ನಂತರ ಸಂಬಂಧಗಳು.ತಾಯಿ ಸ್ಥಾನ ಬಹಳ ದೊಡ್ಡದು. ದೇವರು, ತಾಯಿ ಮಧ್ಯ ಯಾರನ್ನ ಆಯ್ಕೆ ಮಾಡ್ತಾರೆ ಅಂದ್ರೆ, ನಾನು ತಾಯಿಯನ್ನ ಆಯ್ಕೆ ಮಾಡ್ತೀನಿ. ಷರತ್ತು ಇಲ್ಲದೆ ಪ್ರೀತಿ ನೀಡುವಳು ತಾಯಿ ಮಾತ್ರ ಎಂದು ಸಿಎಂ ಬೊಮ್ಮಾಯಿ ತಾಯಿ ಮೇಲಿನ ಪ್ರೀತ ಬಗ್ಗೆ ಹಾಡಿ ಹೊಗಳಿದ್ದಾರೆ.
ರಾಜ್ಯ ಸರ್ಕಾರ, ನಮ್ಮೆಲ್ಲರ ಜವಾಬ್ದಾರಿ ತಾಯಿಯನ್ಮ ರಕ್ಷಣೆ ಮಾಡಬೇಕು. ಯಾಕೆಂದರೆ ಉತ್ತಮ ಮಗುವಿಗೆ ಜನ್ಮ ನೀಡೋದು ತಾಯಿ. ತಾಯಿ, ಮಗುವಿಗೆ ಪೌಷ್ಟಿಕ ಆಹಾರ ನೀಡಬೇಕು. ದೇಶದಲ್ಲಿ ಆಹಾರದಲ್ಲಿ ಪೌಷ್ಠಿಕ ಆಹಾರ ಕೊರತೆಯಿಂದ ಮಕ್ಕಳು ಅನಾರೋಗ್ಯ ತುತ್ತಾಗುತ್ತಿದ್ದಾರೆ. ಈಗ ಸಮಯ ಬಂದಿದೆ ಪೌಷ್ಠಿಕ ಆಹಾರ ನೀಡಬೇಕು. ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ನೀಡಬೇಕು ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





