Breaking News

ಬಿಜೆಪಿ ವಿರುದ್ಧ ಕಿಡಿಕಾರಿದ ಸತೀಶ್ ಜಾರಕಿಹೊಳ್ಳಿ

ಹುಬ್ಬಳ್ಳಿ: ಸುಳ್ಯದಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತನ ಕೊಲೆಯನ್ನು ಬಿಜೆಪಿಯವರು ಗಲಭೆಗೆ ಬಳಕೆ ಮಾಡಿಕೊಂಡಿಲ್ಲ ಇದು ಪುಣ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳ್ಳಿ ಬಿಜೆಪಿ ವಿರುದ್ಧ ಕಿಡಿಕಾರಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಹಿಂದೂಗಳ ಹತ್ಯೆ ಆಗಲಿ ಅದನ್ನು ಬಿಜೆಪಿ ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತದೆ. ಆದರೆ ಪ್ರವೀಣ ಹತ್ಯೆಯನ್ನು ಇಟ್ಟುಕೊಂಡು ಯಾವುದೇ ಪ್ರತಿಭಟನೆ, ಗಲಾಟೆ ಮಾಡಿಸಿಲ್ಲ. ಈ ಘಟನೆಯನ್ನು ಹಿಂದೂ, ಬಿಜೆಪಿ, ಭಜರಂಗ ಅಂತಾ ಚರ್ಚೆ ಮಾಡದೇ ಹತ್ಯೆಯನ್ನು ಪೋಲಿಸರಿಗೆ ಬಿಡಬೇಕು ಎಂದರು.

ಬಿಜೆಪಿಯವರು ತಮಗೆ ಹೇಗೆ ಬೇಕೋ ಹಾಗೇ ಸಂದರ್ಭವನ್ನು ಬಳಕೆ ಮಾಡಿಕೊಳ್ಳುತ್ತದೆ. ಅವರು ಏನೂ ಕೆಲಸ ಮಾಡೋದಿಲ್ಲ. ಆದರೆ ಹಿಜಾಬ್, ಮುಸ್ಲಿಂ ಎಂದು ಬೇರೆಯವರ ಮೇಲೆ ಪ್ರಕರಣವನ್ನು ಹೊರಿಸುವ ಕೆಲಸ ಮಾಡುತ್ತಾರೆಂದು ಆರೋಪಿಸಿದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *