ಆಂಧ್ರ ಪ್ರದೇಶ : ನಡು ರಸ್ತೆಯಲ್ಲೇ ಬಿಯರ್ ಬಾಟಲಿಗಳಿಂದ ಥಳಿಸಿ ಪೊಲೀಸ್ ಕಾನ್ಸ್ ಸ್ಟೇಬಲ್ ನನ್ನು ಹತ್ಯೆಗೈದಿರುವ ಅಮಾನುಷ ಘಟನೆ ಆಂಧ್ರ ಪ್ರದೇಶದ ನಂದ್ಯಾಳದಲ್ಲಿ ಬೆಳಕಿಗೆ ಬಂದಿದೆ.
ಪಟ್ಟಣದ ಟ್ಯಾಟೂ ಅಂಗಡಿಯೊಂದರ ಬಳಿ ಕಾನ್ಸ್ ಸ್ಟೇಬಲ್ ಸುರೇಂದ್ರ ಕುಮಾರ್ ( 35 ) ಅವರನ್ನು ಬರ್ಬರವಾಗಿ ಹೊಡೆದು ಕೊಳ್ಳಲಾಗಿದೆ.ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು , ಸೋಮವಾರ ಬೆಳಕಿಗೆ ಬಂದಿದೆ . ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news





