Breaking News

ಶಾಸಕ ರಘುಪತಿ ಭಟ್​​ ವಿರುದ್ಧ ಗಂಭೀರ ಆರೋಪ


ಉಡುಪಿ : ಮಣಿಪಾಲ -ಅಂಬಾಗಿಲು ಗುಂಡಿಬೈಲು, ಕಲ್ಸಂಕ ರಸ್ತೆ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ ಯುವತಿಯೊಬ್ಬಾಕೆ ಶಾಸಕ ರಘುಪತಿ ಭಟ್​​ ವಿರುದ್ಧ ಆರೋಪ ಮಾಡಿ ವಿಡಿಯೋ ಹರಿಬಿಟ್ಟಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಕೋಮಲ್​ ಜೆನಿಫರ್​ ಎಂಬಾಕೆ ಶಾಸಕ ರಘುಪತಿ ಭಟ್​ ಯಾವುದೇ ಕೆಲಸವನ್ನು ಸರಿಯಾಗಿ ಮಾಡೋದಿಲ್ಲ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ. ಯುವತಿಯ ವಿಡಿಯೋ ಉಡುಪಿ ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನಾವು ರೋಡ್​ ಟ್ಯಾಕ್ಸ್​, ವೆಹಿಕಲ್​ ಟ್ಯಾಕ್ಸ್​, ಟೋಲ್​ಗೇಟ್​ ಟ್ಯಾಕ್ಸ್​ ಹೀಗೆ ಎಲ್ಲಾ ಶುಲ್ಕಗಳನ್ನೂ ಪಾವತಿ ಮಾಡ್ತೇವೆ. ಆದರೂ ನಮಗೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲ. ರಘುಪತಿ ಭಟ್​ ಮನೆಗೆ ಹೋಗುವ ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ತುಂಬಿ ಹೋಗಿದೆ ಎಂದು ಯುವತಿ ವಿಡಿಯೋದಲ್ಲಿ ಕಿಡಿಕಾರಿದ್ದಾರೆ.

ದುಬಾರಿ ವಾಹನಗಳಲ್ಲಿ ತೆರಳುವವರಿಗೆ ಇದು ಗೊತ್ತಾಗೋದಿಲ್ಲ. ಆದರೆ ಕಷ್ಟಪಟ್ಟು ದುಡಿದು ಬೈಕ್​ ತೆಗೆದುಕೊಂಡವರಿಗೆ ಈ ಸಮಸ್ಯೆಯ ನಿಜವಾದ ನೋವು ಅರ್ಥವಾಗುತ್ತೆ ಎಂದು ತುಳುವಿನಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *