ಸಾರಿಗೆ ನಿರ್ವಾಹಕರಿಗೆ ಬೀಳ್ಕೊಡುಗೆ ಸನ್ಮಾನ ಗೌರವ ಅರ್ಪಣೆ
ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮಕ್ಕೆ ನಿಷ್ಠಾವಂತ ಸಾರಿಗೆ ನಿರ್ವಾಹಕರಾಗಿ ಎರಡು ವರ್ಷಗಳ ಸೇವೆ ಸಲ್ಲಿಸಿದ ಎಸ್.ಎಸ್.ದೇವರೆಡ್ಡಿ ನಿರ್ವಾಹಕರನ್ನು ಹುಬ್ಬಳ್ಳಿಯ ಎರಡನೇ ಘಟಕದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಬಸವರಾಜ ಯೋಗಪ್ಪನವರ ಸಾರಿಗೆ ನಿರ್ವಾಹಕ ಎಸ್.ಎಸ್.ದೇವರೆಡ್ಡಿ ಪ್ರಯಾಣಿಕರ ನೆಚ್ಚಿನ ಕಂಡಕ್ಟರ್ ಆಗಿದ್ದರು ಎಂದರು.
ಈ ಸಂದರ್ಭದಲ್ಲಿ ಬಸವರಾಜ ಯೋಗಪ್ಪನವರ ಘಟಕದ ವ್ಯವಸ್ಥಾಪಕರು ರೋಹಿಣಿ ಬೇವಿನಕಟ್ಟಿ, ಬಿ.ಕೆ ನಾಗರಾಜ, ಎಟಿಎಸ್ ನದಾಫ್, ಬಿಎ ಸುರೇಶ್, ಎಲ್ ಎಸ್ ಕುರಿ, ಎಸ್.ಜಿ.ನಾಯಕ್, ಚಂದ್ರು ಸಿದ್ದೂಣ್ಣವರ ದೇವಣ್ಣ ಬೆಳಗಲಿ, ಜಗದೀಶ ಉಮಚಗಿ ಹಾಗೂ ಇನ್ನಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





