ಹುಬ್ಬಳ್ಳಿ:-ಶ್ರೀರಾಮ ದರ್ಬಾರ್ ಪೂಜಾ ವೈಭವ & ಶ್ರೀಚಕ್ರ ಶಕ್ತಿಪೀಠ ಪೂಜಾ & ಶ್ರೀಮದ್ಭಾಗವತ ಕಥಾ ಪ್ರವಚನ ಕಾರ್ಯಕ್ರಮವು ಅಧಿಕ ಮಾಸದ ಕೊನೆಯ ದಿನಗಳಾದ ಅ.9 ರಿಂದ ಅ.15 ವರೆಗೆ ಮಹಾರಾಷ್ಟ್ರದ ಪುಣೆಯ ಭಕ್ತರ ಮನೆಯಲ್ಲಿಯಲ್ಲಿ ನಡೆಯಲ್ಲಿದ್ದು ಅದೇ ರೀತಿಯಾಗಿ ಅ.9 ರಂದು ಮಹಾರಾಷ್ಟ್ರದ ಪುಣೆಯ ಬಾಣೇರ್ ಲ್ಲಿ
ಆಯುರಾರೋಗ್ಯ ಐಶ್ವರ್ಯ ಭಾಗ್ಯವನ್ನು ಶೀಘ್ರವಾಗಿ ಕರುಣಿಸುವ ಶ್ರೀವಿಷ್ಣುರೂಪೀ ಶ್ರೀರಾಮಚಂದ್ರದೇವರ & ಶ್ರೀದುರ್ಗಾಸ್ವರೂಪಿಣಿ ಶ್ರೀಚಕ್ರ ಶಕ್ತಿಪೀಠ ದಿವ್ಯ ಸನ್ನಿಧಾನದ ಮಹಾಪೂಜೆಯನ್ನು
ಡಾ. ಕಂಠಪಲ್ಲಿ ಗುರುಗಳು ಶ್ರೀರಾಮರಕ್ಷಾ ಸ್ತೋತ್ರ, ಪುರುಷ ಸೂಕ್ತ, ಶ್ರೀಸೂಕ್ತ ಪಾರಾಯಣ ಮಂತ್ರಗಳ ನಿನಾದಗಳ ವೈಭವದಿಂದ ನೆರವೇರಿಸಿದರು.
ಶ್ರೀರಾಮ ದರ್ಬಾರ್ ಪೂಜೆ ಮತ್ತು ಶ್ರೀಚಕ್ರ ಶಕ್ತಿಪೀಠ ಪೂಜೆಗಳನ್ನು ಸಲ್ಲಿಸುವುದರಿಂದ, ಮುಖ್ಯವಾಗಿ ದಾರಿದ್ರ್ಯ ಪರಿಹಾರವಾಗಿ ಐಶ್ವರ್ಯ ದೊರೆಯುತ್ತದೆ. ಶೀಘ್ರವಾಗಿ ಕಲ್ಯಾಣವಾಗುತ್ತದೆ. ಎಂದು ನೆರೆದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ಮಾಡಿದರು. ಅನೇಕ ಭಕ್ತರು ಭಾಗವಹಿಸಿ ಧನ್ಯರಾದರು.ಹೆಚ್ಚಿನ ಮಾಹಿತಿಗಾಗಿ 974134 ಸಂಖ್ಯೆಗೆ ಸಂಪರ್ಕಿಸಬಹುದು.

bigtvnews | Hubli Dharwad News | Kannada News | Karnataka News Hubli News | News In Hubli | Local news





