Breaking News

ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಯ ಜೊತೆಗೆ ಸೌರಿನ್ ಶುಗರ್ ಫ್ಯಾಕ್ಟರಿಯೂ ಕೂಡ ಸಾಲ ಮರುಪಾವತಿ ಮಾಡಿಲ್ಲ…

ಶಿರಸಿ (ಉತ್ತರಕನ್ನಡ): ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ( ಕೆಡಿಸಿಸಿ ) ನಿಂದ ಮಾಜಿ ಸಚಿವ ರಮೇಶ ಜಾರಕಿಹೊಳಿ ಒಡೆತನದ
ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಗೆ ನೀಡಿದ ಸಾಲ ಮರುಪಾವತಿ ಆಗಿಲ್ಲ ಎಂದು ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಯ ಜೊತೆಗೆ ಸೌರಿನ್ ಶುಗರ್ ಫ್ಯಾಕ್ಟರಿಯೂ ಕೂಡ ಸಾಲ ಮರುಪಾವತಿ ಮಾಡಿಲ್ಲ. ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಇತರರಿಗೆ ಸೇರಿದ ಕಾರ್ಖಾನೆಗೆ ನೀಡಿದ ಸಾಲ ಶೆ. 100ರಷ್ಟು ಸಾಲ ವಸೂಲಿ ಆಗಿದೆ ಎಂದು ಹೇಳಿದರು.

2 ಸಕ್ಕರೆ ಕಾರ್ಖಾನೆಗಳು ತಮ್ಮ ಸಾಲವನ್ನು ಬಾಕಿ ಉಳಿಸಿಕೊಂಡಿದೆ. ಉಳಿದ ಸಕ್ಕರೆ ಕಾರ್ಖಾನೆಗಳ ಸಾಲ ಮರುಪಾವತಿ ಆಗಿದೆ. ಮರುಪಾವತಿ ಮಾಡದ 2 ಕಾರ್ಖಾನೆಗಳು ಎನ್ಸಿಟಿಗೆ ಹೋಗಿದ್ದಾರೆ. ಅಲ್ಲಿ ಅವರ ಪರವಾಗಿ ತೀರ್ಪು ಬಂದರೆ ಎನ್ಸಿಟಿ ವಿರುದ್ಧ ಸುಪ್ರೀಂ ಕೋರ್ಟ್​ಗೂ ಹೋಗೋಕಾಗಲ್ಲ. ಇದು ಇಂಡಸ್ಟ್ರಿಯಲ್ ಆಕ್ಟ್‌ನಲ್ಲಿದೆ. ಅಲ್ಲಿ ಇತ್ಯರ್ಥ ಆಗೋವರೆಗೂ ನಾವೇನೂ ಮಾಡೋಕಾಗಲ್ಲ ಎಂದು ಹೇಳಿದರು.

ಸನಾತನ ಧರ್ಮದ ಕುರಿತು ಮಾತನಾಡಿದ ಹೆಬ್ಬಾರ್, ಧರ್ಮವನ್ನು ಉಳಿಸೋದು ನಮ್ಮ ಕರ್ತವ್ಯ. ಅದರ ಹೆಸರಿನಲ್ಲಿ ಯಾರು ಏನು ಮಾತನಾಡಿದ್ದಾರೆ ಅನ್ನೋದನ್ನು ನಾನು ಚರ್ಚೆ ಮಾಡಲ್ಲ‌. ನಾವೆಲ್ಲ ಸನಾತನ ಧರ್ಮದ ಹಿನ್ನೆಲೆಯಿಂದ ಬಂದವರು. ನಮ್ಮ ಧರ್ಮದ ತಳಹದಿಯಲ್ಲಿ ನಾವು ಬದುಕುತ್ತೇವೆ. ನಮ್ಮ ಧರ್ಮವನ್ನು ಪ್ರೀತಿಸುತ್ತೇವೆ, ಅನ್ಯ ಧರ್ಮವನ್ನು ದ್ವೇಷ ಮಾಡೋ ಪ್ರವೃತ್ತಿ ಇಲ್ಲ. ಭಾರತೀಯ ಸಂಸ್ಕೃತಿಯೇ ಹಾಗೇ. ಯಾವುದೋ ರಾಜಕೀಯ ಪಕ್ಷದ ಕಾರಣದಿಂದ ಧರ್ಮ ಹುಟ್ಟಿಲ್ಲ. ಸನಾತನ ಪರಂಪರೆಯಿಂದ ಬಂದಿದ್ದು. ಯಾರು ಏನು ಮಾತಾಡ್ತಾರೆ ಅನ್ನೋದಕ್ಕೆ ನಾನ್ ತಲೆಕೆಡಿಸಿಕೊಳ್ಳಲ್ಲ ಎಂದು ಪ್ರತಿಕ್ರಿಯಿಸಿದರು.‌

Share News

About BigTv News

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *