ಚಿಕ್ಕಮಗಳೂರು: ಪಕ್ಕದ ಮನೆ ನಾಯಿ ಬೊಗಳಿದ್ದಕ್ಕೆ ನಾಯಿ ಮಾಲೀಕನ ಮೇಲೆ ಆಸಿಡ್ ದಾಳಿ ನಡೆಸಿದ ಘಟನೆ ಎನ್. ಆರ್. ಪುರದಲ್ಲಿ ನಡೆದಿದೆ. ನಾಯಿ ಮಾಲೀಕನ ಎಡಗಣ್ಣಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಯಿ ಬೊಗಳಿದ್ದಕ್ಕೆ ಆಸಿಡ್ ದಾಳಿ ನಡೆಸಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ. ನಾಯಿ ಮಾಲೀಕ ಸುಂದರ್ ರಾಜ್ ಎಂಬುವವರ ಮೇಲೆ ಆಸಿಡ್ ದಾಳಿ ಮಾಡಲಾಗಿದೆ. ನಾಯಿ ಬೊಗಳಲು ಆರಂಭಿಸಿದಾಗ ಪಕ್ಕದ ಮನೆಯ ಜೇಮ್ಸ್ ನಾಯಿಗೆ ಬೈದಿದ್ದಾರೆ. ಆಗ ಮಾಲೀಕ ಸುಂದರ್ ರಾಜ್ ಸಹ ನಾಯಿಗೆ ಬೈಯಲು ಆರಂಭಿಸಿದ್ದಾರೆ. ಆಗ ಜೇಮ್ಸ್ ತಮಗೆ ಬೈಯುತ್ತಿದ್ದಾನೆ ಎಂದು ತಿಳಿದು ಸುಂದರ್ ರಾಜ್ ಮುಖಕ್ಕೆ ಆಸಿಡ್ ಎರಚಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





