ರಾಜಕಾರಣಿಗಳ ಮಕ್ಕಳು ಏನ ಮಾಡಿದ್ರು ನಡೆಯುತ್ತೆ ಅನ್ನೊ ಸಂಶಯಕ್ಕೆ ಈ ಘಟನೆ ಸಾಕ್ಷಿ ಆಗುತ್ತಾ..????
ಅಯ್ಯೋ ರಾಮ ರಾಮ….. ಸಿದ್ದರಾಮೇಶ್ವರ ನಗರದಲ್ಲಿ ತಪ್ಪಿತು ದೊಡ್ಡ ಅನಾಹುತ!!!
ಈ ಘಟನೆಯ ಸತ್ಯಾ ಸತ್ಯತೆ ಜನರಿಗೆ ತಿಳಿಸುತ್ತಾ ಖಾಕಿ ಪಡೆ!!!!
ಹುಬ್ಬಳ್ಳಿ: ಪಾಲಿಕೆ ಸದಸ್ಯನ ಮಗನೊರ್ವ ಕ್ಷುಲ್ಲಕ ವಿಚಾರಕ್ಕೆ ಯುವಕರಿಬ್ಬರ ಮೇಲೆ ಹಲ್ಲೇ ಮಾಡಿರುವ ಆರೋಪ ಹುಬ್ಬಳ್ಳಿಯಲ್ಲಿ ಕೇಳಿಬಂದಿದೆ.ಚಿದಾನಂದ ನರಗುಂದ ಎಂಬಾತನೇ ಹಲ್ಲೆ ಮಾಡಿದ್ದಾನೆ ಎಂದು ಹೇಳಾಗುತ್ತಿದ್ದು, ಸಿದ್ದರಾಮೇಶ್ವರ ಕಾಲೋನಿ ಹತ್ತಿರ ಪಾರ್ಕಿಂಗ್ ವಿಷಯವಾಗಿ ಚಿದಾನಂದ ಯುವಕರೊಂದಿಗೆ ಮಾತಿಗೆ ಮಾತು ಬೆಳೆಸಿ ಕೊನೆಗೆ ತನ್ನ ಕಾರನ್ನು ಯುವಕರ ಮೇಲೆ ಹತ್ತಿಸಲು ಯತ್ನಿಸಿದ್ದಾನಂತೆ. ಅಷ್ಟೇ ಅಲ್ಲದೇ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಸದ್ಯ ಗಾಯಗೊಂಡ ಯುವಕರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸಿಪಿ ಶಿವಪ್ರಕಾಶ್ ನಾಯ್ಕ ಕಿಮ್ಸ್’ಗೆ ಭೇಟಿ ನೀಡಿ ಗಾಯಾಳುಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಈ ಘಟನೆ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

