ನಿರ್ದೇಶಕ ಮತ್ತು ಕನ್ನಡ, ತುಳು, ಕೊಂಕಣಿ ಚಿತ್ರನಟ ರೂಪೇಶ್ ಶೆಟ್ಟಿ ತಮಿಳು ಚಿತ್ರರಂಗದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಯೋಗಿಬಾಬು ನಟನೆಯ ಸನ್ನಿಧಾನಂ ಪಿಒ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿ ನಟಿಸುತ್ತಿದ್ದಾರೆ. ಈ ಸಿನಿಮಾವು ಶಬರಿಮಲೆಯ ಕಥೆ ಹೊಂದಿದ್ದು ನಾಪತ್ತೆಯಾದ ಮಗನನ್ನು ಹುಡುಕುವ ತಾಯಿಯ ಕಥೆ ಇದರಲ್ಲಿರಲಿದೆ. ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

