ಧಾರವಾಡ: ಪ್ರಯಾಣಿಕ ಬಿಟ್ಟು ಹೋದ ಬ್ಯಾಗ್ ಅನ್ನು ಆಟೋ ಚಾಲಕ ಪೊಲೀಸರ ಸಮ್ಮುಖದಲ್ಲಿ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ ಜರ್ಮನ್ ಆಸ್ಪತ್ರೆಯಿಂದ ಧಾರವಾಡ ಹಳೇ ಬಸ್ ನಿಲ್ದಾಣದ ವರೆಗೆ ಆಟೋ ಹತ್ತಿ ಬಂದಿದ್ದರು.ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಗುಳಪ್ಪ ನಿಂಗಪ್ಪ ಕವಳಿ ಎಂಬುವರು ಬ್ಯಾಗ್ ಆಟೋದಲ್ಲಿ ಬಿಟ್ಟು ಹೋಗಿದ್ದು, ನಂತರ ಧಾರವಾಡ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬ್ಯಾಗಿನಲ್ಲಿ ಫೋನ್, ಒಂದು ತೊಲೆ ಬಂಗಾರ ಚೈನ್, ಪರ್ಸ್ ಹಾಗೂ ನಗದು ಸಹ ಇತ್ತು. ಆಟೋ ಚಾಲಕ ಪೊಲೀಸರ ಕರೆಗೆ ಸ್ಪಂದಿಸಿ, ಪೊಲೀಸ್ ಠಾಣೆಗೆ ಆಗಮಿಸಿ ಬ್ಯಾಗ್ ಬಿಟ್ಟು ಹೋದ ಪ್ರಯಾಣಿಕರಿಗೆ ಮರಳಿಸಿ ಮಾನವೀಯತೆ ಮೆರೆದ್ದು, ಪೊಲೀಸ್ ಇನ್ಸ್ಪೆಕ್ಟರ್ ಎನ್.ಸಿ ಕಾಡದೇವರ ಅವರು ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

