ಧಾರವಾಡ: ಮಳೆಯಿಂದಾಗಿ ರೈತರ ಬೆಳೆ ಹಾನಿಯಾಗಿದ್ದು, ರೈತರಿಗೆ ಪರಿಹಾರ ಒದಗಿಸಬೇಕು ಎಂದು ಶಾಸಕ ಆರ್. ವಿ ದೇಶಪಾಂಡೆ ಅವರಿಗೆ ರೈತರು ಮನವಿ ಸಲ್ಲಿಸಿದರು. ಧಾರವಾಡ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ರೈತರು ಶಾಸಕ ಆರ್. ವಿ ದೇಶಪಾಂಡೆ ಅವರನ್ನು ಬೇಟಿ ಮಾಡಿ ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ರೈತರಾದ ನಿಂಗನಗೌಡ ಪಾಟೀಲ, ಮಹದೇವಪ್ಪ ಪೂಜಾರ, ಬಸವರಾಜ ಯರಗುಪ್ಪಿ, ಬಸವರಾಜ ಮಡಿವಾಳರ, ಶಂಕರಪ್ಪ ಚಿಲ್ಲೂರ, ಈರಣ್ಣ ಕುರುವಿನಶೆಟ್ಟಿ, ಬಸವರಾಜ ಮಡ್ಲಿ, ಮಂಜುನಾಥ ಕರಡಿ ಸೇರಿದಂತೆ ಹಲವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

