ಹುಬ್ಬಳ್ಳಿ: ರಾಜ್ಯ ಸರ್ಕಾರ ಕಳಸಾ ಬಗ್ಗೆ ಇದುವರೆಗೂ ಪ್ರಪೋಸಲ್ ಕಳಿಸಿಯೇ ಇಲ್ಲಾ. ಬಂದಾಗೆಲ್ಲ ಮಹದಾಯಿ ವಿಚಾರವನ್ನು ಮಾತನಾಡಿಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಮಹದಾಯಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವನ್ಯಜೀವಿ ಮಂಡಳಿಯವರು ಈ ವಿಷಯದಲ್ಲಿ ಪ್ರತಿಕ್ರಿಯೆ ಕೊಡಬೇಕಿತ್ತು. ರಾಜ್ಯ ಸರ್ಕಾರ ಕಳಸಾ ಬಗ್ಗೆ ಇದುವರೆಗೂ ಪ್ರಪೋಸಲ್ ಕಳಿಸಿಯೇ ಇಲ್ಲಾ. ಬಂಡೂರಾ ಬಗ್ಗೆ ಒಂದು ಪ್ರಪೋಸಲ್ ಇದೆ. ಉಳಿದೆಲ್ಲ ಸಂಗತಿಯನ್ನು ನಾವು ಬಿಜೆಪಿ ಅವರು ಮಾಡಿದ್ದೇವೆ ಎಂದರು.
ಎನ್ವರನ್ನೆಂಟ್ ಎಕ್ಸಿಮಷೆನ್ ಕೊಡಿಸಿದವರು ನಾವೇ. ಟ್ರಿಬ್ಯುನಲ್ ಗೆ ನ್ಯಾಯಾಧೀಶರನ್ನು, ಕಚೇರಿ, ಸಿಬ್ಬಂದಿ ಕೊಟ್ಟು 4 ವರ್ಷದಲ್ಲಿ ರಿಪೋರ್ಟ್ ಕೊಡಲು ಸಮಯ ವಿನಾಯತಿ ಕೇಳಿದ್ವಿ. ಗೆಜೆಟ್ ನೋಟಿಫಿಕೇಶನ್, ಡಿಪಿಆರ್ ಅಪೂವಲ್ ಮಾಡಿಸಿದ್ದೇವೆ. ಅರಣ್ಯ ಭೂಮಿ ಕೊಡಬೇಕು ಅಂತ ಬಂದಾಗ ಹುಲಿ ಸಂರಕ್ಷಣಾ ಪ್ರದೇಶ ಅಂತ ಬಂದಿದೆ. ಈ ಬಗ್ಗೆ ಮೊದಲನೇ ಸ್ಟ್ಯಾಂಡಿಂಗ್ ಕಮಿಟಿ ಪರಿಶೀಲನೆ ಮಾಡಿದೆ ಎಂದು ಅವರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

