ಗ್ರಾಮದ ಜಮೀನೊಂದರಲ್ಲಿ ಯುವಕನೊಬ್ಬ ಅರೆ ಬೆತ್ತಲಾಗಿ ಸತ್ತು ಬಿದ್ದಿದ್ದ. ಸತ್ತವನು ಹೊನ್ನುರು ಗ್ರಾಮದವನಾಗಿರಲಿಲ್ಲ.ಹೊನ್ನೂರು ಗ್ರಾಮದ ಜಮೀನಲ್ಲಿ ಹೆಣವಾಗಿ ಬಿದ್ದವನು ಚಿತ್ರದುರ್ಗ ತಾಲೂಕಿನ ಹೆಗಡೆಹಾಳ್ ಗ್ರಾಮದವನಾದ ಶಿವಕುಮಾರ್. ಈತನನ್ನ ಕೊಂದಿದ್ದು ಹೊನ್ನೂರು ಗ್ರಾಮದ ಜಯಪ್ಪ.ಶಿವಕುಮಾರನ ಕೊಲೆಗೈದು ತಲೆಮರೆಸಿಕೊಂಡಿದ್ದ ಹಂತಕ ಜಯಪ್ಪನನ್ನ ಪತ್ತೆ ಹಚ್ಚಿದ್ದು ಪೊಲೀಸ್ ಶ್ವಾನ ತಾರಾ. ಕೊಲೆ ನಡೆದ ಸ್ಥಳಕ್ಕೆ ಶ್ವಾನದಳ ಬಂದು ಪರಿಶೀಲನೆ ನಡೆಸುತ್ತಿದ್ದಂತೆ ಶ್ವಾನ ತಾರಾ. ಕೆಲ ಕಿಲೋಮೀಟರ್ ದೂರದಲ್ಲಿ ಅಡಗಿಕೊಂಡಿದ್ದ ಜಯಪ್ಪನ ಬಳಿ ಓಡಿಹೋಗಿ, ಕೊಲೆಗಾರನನ್ನ ಸಿಕ್ಕಿಬೀಳಿಸಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

