Breaking News

ರಾಮದುರ್ಗ :ವಾಹನದ ಮೇಲೆ ಮರ ಬಿದ್ದು 12 ಜನರಿಗೆ ಗಾಯ!!

ಬುಧವಾರ ಸುರಿದ ಮಳೆ ಮತ್ತು ಬಿರುಗಾಳಿಯಿಂದ ಬೇವಿನ ಮರದ ಬೇರು ಸಡಿಲಗೊಂಡಿತ್ತು. ಹಾಗಾಗಿ ಗುರುವಾರ ಮಳೆಯಾಗದಿದ್ದರೂ, ಏಕಾಏಕಿಯಾಗಿ ಮರ ಬಿದ್ದಿದ್ದರಿಂದ ವಾಹನ ಸಂಪೂರ್ಣ ಹಾಳಾಗಿದೆ. ಕೆಲವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ, ಉಳಿದವರನ್ನು ಹುಬ್ಬಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ್ದ ವಲಯ ಅರಣ್ಯಾಧಿಕಾರಿ ಭಾಗ್ಯಶ್ರಿ ಮಸಳಿ ಅವರನ್ನು ಗಾಯಾಳು ಕುಟುಂಬದವರು ತರಾಟೆಗೆ ತೆಗೆದುಕೊಂಡರು.ಮದುವೆಗೆಂದು ವಧು ಮತ್ತು ಸಂಬಂಧಿಕರನ್ನು ಹೊತ್ತು ಬರುತ್ತಿದ್ದ ಕ್ರೂಸರ್‌ ವಾಹನ ಮೇಲೆ ಮರ ಉರುಳಿ ಬಿದ್ದು ವಧು ಸೇರಿದಂತೆ 12 ಜನರು ಗಾಯಗೊಂಡ ಘಟನೆ ತಾಲ್ಲೂಕಿನ ದೊಡಮಂಗಡಿ ಬಳಿ ಗುರುವಾರ ರಾತ್ರಿ ನಡೆದಿದೆ

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *