Breaking News

ಬೆಂಗಳೂರಲ್ಲಿ ‘ಹಿಟ್ ಅಂಡ್ ರನ್’ಗೆ ಯುವಕ ಬಲಿ

ನಗರದಲ್ಲಿ ಹಿಟ್ ಅಂಡ್ ರನ್ ಗೆ ಮತ್ತೊಂಬು ಬಲಿಯಾಗಿದೆ. ಬೆಂಗಳೂರಿನ ಕೆ ಆರ್ ಪುರಂನ ಭಟ್ಟರಹಳ್ಳಿ ಸಿಗ್ನಲ್ ಬಳಿಯಲ್ಲಿ ನಡೆದಂತ ಭೀಕರ ಅಪಘಾತದಲ್ಲಿ ಸ್ವಿಗ್ಗಿ ಡಿಲವರಿ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಮೃತನನ್ನ ನೇಪಾಳ ಮೂಲದ ಸುರೇಂದರ್ ಬಹದ್ದೂರ್(38) ಎಂಬುದಾಗಿ ತಿಳಿದು ಬಂದಿದೆ.ಸ್ವಿಗ್ಗಿಯಲ್ಲಿ ಸುರೇಂದರ್ ಬಹದ್ದೂರ್ ಕೆಲಸ ಮಾಡುತ್ತಿದ್ದರು. ಡೆಲಿವರಿ ಕೊಡಲು ಹೋಗುವಾಗ ಬೈಕ್ ಗೆ ಕಾರು ಡಿಕ್ಕಿಯಾಗಿ ಈ ಅಫಘಾತ ಸಂಭವಿಸಿದೆ. ಸ್ವಿಗ್ಗಿ ಆರ್ಡರ್ ತೆಗೆದುಕೊಂಡು ಕೊಡೋದಕ್ಕೆ ತೆರುವಾಗ ಕಾರೊಂದು ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಸುರೇಂದರ್ ಬಹದ್ದೂರ್ ಸಾವನ್ನಪ್ಪಿದರೂ ಕಾರು ಚಾಲಕ ಪರಾರಿಯಾಗಿದ್ದಾನೆ. ಕಾರು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೆ ಆರ್ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *