ಬೀದರ್ ಜಿಲ್ಲೆಯ ಶಿವನಗರದಲ್ಲಿ ನಿನ್ನೆ ಮಧ್ಯರಾತ್ರಿ ಕಿಡಿಗೇಡಿಯೊಬ್ಬ ಕಿರಿಕ್ ಮಾಡಿದ್ದಾನೆ. ಮನೆ ಮುಂದೆ ನಿಲ್ಲಿಸಿದ್ದ ಓಮ್ನಿ ಕಾರಿಗೆ ಬೆಂಕಿ ಹಚ್ಚಿ, ನಂತರ ಮನೆಯ ಮುಂದಿದ್ದ ಇತರ ವಸ್ತುಗಳನ್ನು ಎಸೆದು ದಾಂಧಲೆ ಮಾಡಿದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಈ ಘಟನೆಯಲ್ಲಿ ರಮೇಶ ಗಾಯಕವಾಡ ಎಂಬುವವರಿಗೆ ಸೇರಿದ್ದ ಓಮ್ನಿ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಸ್ಥಳೀಯರ ಪ್ರಕಾರ, ಸುದರ್ಶನ ಎಂಬ ವ್ಯಕ್ತಿಯೇ ಈ ಕೃತ್ಯಕ್ಕೆ ಕಾರಣ ಎಂಬ ಆರೋಪವಿದೆ. ಇಬ್ಬರ ನಡುವೆ ನಿವೇಶನ (ಸೈಟ್/ಪ್ಲಾಟ್) ವಿಚಾರದಲ್ಲಿ ದೀರ್ಘಕಾಲದಿಂದ ತಕರಾರು ನಡೆಯುತ್ತಿದ್ದು, ಇದೇ ಕೋಪದಲ್ಲಿ ರಾತ್ರಿ ಸಮಯದಲ್ಲಿ ಯಾರೂ ಎಚ್ಚರವಿಲ್ಲದ ಸಮಯದಲ್ಲಿ ಬಂದು ಕಾರಿಗೆ ಬೆಂಕಿ ಹಚ್ಚಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಈ ಘಟನೆಯ ದಾಖಲೆ ತೆಗೆದುಕೊಂಡಿದ್ದು, ಸಿಸಿ ಕ್ಯಾಮರಾ ದೃಶ್ಯಗಳ ಆಧಾರದ ಮೇಲೆ ಆರೋಪಯನ್ನು ಹುಡುಕಿ ಬಂಧಿಸಲು ತನಿಖೆ ಆರಂಭಿಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಇಂತಹ ಕೃತ್ಯಗಳು ಮತ್ತೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

