ಬೆಂಗಳೂರು: ‘ಕೋಣನಕುಂಟೆ ಠಾಣೆಯ ಇನ್ಸ್ಪೆಕ್ಟರ್ ಪಾಪಣ್ಣ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ರೌಡಿಶೀಟರ್ ಯಶಸ್ವಿನಿಗೌಡ ಅವರು ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ. ಆಡಿಯೊ ಸಂಭಾಷಣೆ ಹಾಗೂ ವಾಟ್ಸ್ಆಯಪ್ ಸಂದೇಶಗಳ ಸಮೇತ ದೂರು ನೀಡಿದ್ದಾರೆ. ಇನ್ಸ್ಪೆಕ್ಟರ್ ವಿರುದ್ಧ ಇಲಾಖಾ ತನಿಖೆ ನಡೆಸಿ ವರದಿ ನೀಡುವಂತೆ ದಕ್ಷಿಣ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರಿಗೆ ನಗರ ಪೊಲೀಸ್ ಕಮಿಷನರ್ ಸೂಚಿಸಿದ್ದಾರೆ. ‘2017ರಲ್ಲಿ ನನ್ನ ವಿರುದ್ಧ ಬಸವನಗುಡಿ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು. ಆಗ ಪಾಪ್ಪಣ್ಣ ಠಾಣಾಧಿಕಾರಿ ಆಗಿದ್ದರು. ಆಗ ನನ್ನ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದರು. ಅಂದಿನಿಂದ ನಿತ್ಯ ಸಂದೇಶ ಕಳುಹಿಸುತ್ತಿದ್ದರು. ಬಳಿಕ ಡಿಸಿಪಿಗೂ ದೂರು ನೀಡಿದ್ದೆ. ಆಗ ಪಾಪ್ಪಣ್ಣ ಅವರು ಬೆದರಿಕೆ ಹಾಕಿದ್ದರು’ ಎಂದು ಯಶಸ್ವಿನಿಗೌಡ ಮಾಧ್ಯಮದವರಿಗೆ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

