Breaking News

ಮನೆಯಲ್ಲಿ ಚಿನ್ನಾಭರಣ ಕಳವು

ಚಿಂತಾಮಣಿ: ನಗರದ ಕನ್ನಂಪಲ್ಲಿ ಚೌಡೇಶ್ವರ ಬಡಾವಣೆಯಲ್ಲಿ ಮನೆಗೆ ಕನ್ನ ಹಾಕಿದ ಖದೀಮರು, 231 ಗ್ರಾಂ ಚಿನ್ನಾಭರಣ, 2 ಕೆಜಿ ಬೆಳ್ಳಿ ಮತ್ತು 25 ಸಾವಿರ ರೂ.ಕಳವು ಮಾಡಿದ್ದಾರೆ. ಸಂಬಂಧಿಕರೊಬ್ಬರ ನಾಮಕರಣದ ಬಟ್ಟೆಗಳ ಖರೀದಿಗಾಗಿ ಬೆಂಗಳೂರಿಗೆ ಮಾ.28ರಂದು ರಾತ್ರಿ ಪತ್ನಿಯೊಂದಿಗೆ ಹೋಗಿದ್ದು, 30ರಂದು ಬಾಗಿಲು ತೆಗೆದು ನೋಡಿದಾಗ ಬೀರು, ಕಬೋರ್ಡ್​ಗಳಲ್ಲಿದ್ದ ಬಂಗಾರ, ಬೆಳ್ಳಿ ವಸ್ತುಗಳು ಮತ್ತು 25ಸಾವಿರ ರೂ.ನಗದು ದೋಚಿರುವುದು ಗೊತ್ತಾಯಿತು ಎಂದು ಮನೆ ಮಾಲೀಕ, ಯಗವಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ಮಂಜುನಾಥ್​ ಚಿಂತಾಮಣಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Share News

About BigTv News

Check Also

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡಿದವನನ್ನ ಅರೆಸ್ಟ್ ಮಾಡಲಾಗಿದೆ : ಜಿ.ಪರಮೇಶ್ವರ್

ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ …

Leave a Reply

Your email address will not be published. Required fields are marked *