ಚಿಕ್ಕಬಳ್ಳಾಪುರ: ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಏಳು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಕುಖ್ಯಾತ ಮನೆಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಚೇಳೂರು ತಾಲ್ಲೂಕು ಕೊಟ್ಟಂಪಲ್ಲಿಯ ಉಮಾಶಂಕರ ರೆಡ್ಡಿ (38) ಮತ್ತು ಪಾವಗಡ ತಾಲ್ಲೂಕು ಕೊಡಿಗೇಹಳ್ಳಿಯ ಜಗನ್ನಾಥ್ (33) ಬಂಧಿತರು. ಆರೋಪಿಗಳಿಂದ ₹9.10 ಲಕ್ಷ ಮೌಲ್ಯದ ಚಿನ್ನದ ಗಟ್ಟಿಗಳು, ಆಭರಣ, ಕಾರು ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ತಾಲ್ಲೂಕಿನ ರೆಡ್ಡಿಹಳ್ಳಿಯ ಗಂಗೋತ್ರಿ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. 66 ಗ್ರಾಂ ಚಿನ್ನದ ಆಭರಣಗಳು ಕಳ್ಳತನವಾಗಿದ್ದವು. ಈ ಬಗ್ಗೆ ಅವರು ಪೆರೇಸಂದ್ರ ಠಾಣೆಗೆ ದೂರು ನೀಡಿದ್ದರು. ಆರೋಪಿಗಳ ಪತ್ತೆಗೆ ಗುಡಿಬಂಡೆ ಸಿಪಿಐ ಮುನಿಕೃಷ್ಣ ಡಿ.ಎಚ್. ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳು ಗೌರಿಬಿದನೂರು, ತುಮಕೂರು ಮತ್ತು ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿಯೂ ಆರೋಪಿಗಳಾಗಿದ್ದಾರೆ. ಸಿಬ್ಬಂದಿ ಅರುಣ್, ಮಾರುತಿ, ಮುರುಳಿ, ಮೋಹನ್ ಕುಮಾರ್, ಮಂಜುನಾಥ್, ಮಂಜುನಾಯ್ಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

