ತುಮಕೂರು ಜಿಲ್ಲೆಯ ಅಂಚಿಹಳ್ಳಿ ಕಾಡಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಮೃತದೇಹವು ಮುತ್ತಗದಹಳ್ಳಿಯ 26 ವರ್ಷದ ಶ್ವೇತಾಳದ್ದು ಎಂದು ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿದೆ. ಪ್ರಕರಣದ ತನಿಖೆ ನಡೆಸಿದ ತುರುವೇಕೆರೆ ಪೊಲೀಸರು, ಮೊಬೈಲ್ ಕರೆ ವಿವರಗಳ ಆಧಾರದಲ್ಲಿ 53 ವರ್ಷದ ಭಾನುಪ್ರಕಾಶ್ನನ್ನು ಬಂಧಿಸಿದ್ದಾರೆ. ಆರೋಪಿಗೆ ಶ್ವೇತಾಳೊಂದಿಗೆ ಹಲವು ವರ್ಷಗಳಿಂದ ಅಕ್ರಮ ಸಂಬಂಧವಿದ್ದು, ಬಳಿಕ ದೂರವಾದ ಕಾರಣ ಅಸೂಯೆಯಿಂದ ಕೊಲೆ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. ಜನವರಿ 19ರಂದು ಆದಿಚುಂಚನಗಿರಿಗೆ ಕರೆಸಿ ಉಸಿರುಗಟ್ಟಿಸಿ ಹತ್ಯೆ ಮಾಡಿ, ಬಳಿಕ ಶವವನ್ನು ಕಾಡಿನಲ್ಲಿ ಸುಟ್ಟಿರುವುದಾಗಿ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

