ಗದಗ ನಗರದ ದೋಬಿ ಘಾಟ್ ಬಳಿ ಕುಡಿದ ಮತ್ತಿನಲ್ಲಿ ಜಗಳವಾಡುತ್ತಿದ್ದ ಯುವಕರನ್ನು ಬಿಡಿಸಲು ಹೋದ ಶಿರಹಟ್ಟಿ ಠಾಣೆಯ ಪೇದೆ ಅಶೋಕ ಪಾಟೀಲ ಮೇಲೆ ಹಲ್ಲೆ ನಡೆದಿದೆ. ಮಲ್ಲಸಮುದ್ರ ಗ್ರಾಮದ ಯುವಕರು ಅಶೋಕ ಅವರ ತಲೆ, ಮುಖ ಹಾಗೂ ಎದೆ ಭಾಗಕ್ಕೆ ಹಲ್ಲೆ ನಡೆಸಿದ್ದು, ಗಾಯಗೊಂಡ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

