Breaking News

ಮದುವೆಗೂ ಮುಂಚೆ ಮಗು… ಆ ಮಗುವನ್ನ ಮಾರಿದ್ರಾ..? ಮರೆಮಾಚಿದ್ರಾ..? ಈಗ ಮಗು ಎಲ್ಲಿದೆ ಎಂಬ ಪ್ರಶ್ನೆ ಹುಬ್ಬಳ್ಳಿಯನ್ನು ಕಾಡುತ್ತಿದೆ..!

ಮದುವೆಗೆ ಮುಂಚೆಯೇ ತಾಯಿಯಾದ ಯುವತಿ… ಹುಟ್ಟಿದ ಮಗುವಿಗೆ ಏನಾಯ್ತು..? ಮಾರಾಟವಾಯ್ತಾ ಅಥವಾ ಬೆಚ್ಚಿಬೀಳಿಸುವ ರಹಸ್ಯ..!

ಮದುವೆಗೂ ಮುಂಚೆ ಮಗು… ಬಳಿಕ ಮಗುವಿಗೆ ಏನಾಯ್ತು? ಮಾರಿದ್ರಾ..? ಮರೆಮಾಚಿದ್ರಾ..?

ನನಗೆ ಮಗು ಬೇಕು ಎಂದ ಯುವತಿ… ಹಾಗಾದರೆ ಹುಟ್ಟಿದ ಆ ಮಗು ಎಲ್ಲಿದೆ..? ಹುಬ್ಬಳ್ಳಿಯಲ್ಲಿ ಶಾಕ್…!

ಒಂದು ಮಗುವಿನ ಮಿಸ್ಟರಿ: ಹುಟ್ಟಿದ ಮಗು ಈಗ ಯಾರ ಬಳಿ..? ಬದುಕಿದೆಯಾ… ಅಥವಾ ಮಾರಾಟವಾಯಿತಾ..?

ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ರಹಸ್ಯ: ಮದುವೆಗೆ ಮುಂಚೆ ಮಗು… 5 ತಿಂಗಳ ಬಳಿಕ ಹೊರಬಿದ್ದ ಸತ್ಯ..!ಇದು ಸಿನಿಮಾ ಕಥೆಯಾ ಅಥವಾ ನಿಜಘಟನೆಯಾ..? ಹುಬ್ಬಳ್ಳಿಯಲ್ಲಿ ಯುವತಿಯ ಶಾಕಿಂಗ್ ಸ್ಟೋರಿ..!ಹುಬ್ಬಳ್ಳಿಯಲ್ಲಿ ನಡೆದಿರುವ ಒಂದು ಘಟನೆ ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮೊದಲಿಗೆ ಕೇಳಿದವರು ಇದು ನಿಜನಾ..?

ಎಂದು ಮತ್ತೆ ಮತ್ತೆ ಕೇಳುವಂತಾಗಿದೆ. ಅಷ್ಟು ವಿಚಿತ್ರ… ಅಷ್ಟು ಅಚ್ಚರಿಯ ಘಟನೆ ಇದು… ಮದುವೆಯ ಕನಸು ಕಾಣುತ್ತಿದ್ದ ಯುವತಿ, ಎಂಗೇಜ್‌ಮೆಂಟ್ ಆದ ಬಳಿಕ ತನ್ನ ಪ್ರಿಯಕರನ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಳು. ಯಾರಿಗೂ ಗೊತ್ತಾಗದಂತೆ ಸಾಗುತ್ತಿದ್ದ ಆ ಸಂಬಂಧ ಒಂದು ದಿನ ದೊಡ್ಡ ತಿರುವು ಪಡೆದಿತು. ಕೆಲ ತಿಂಗಳ ಬಳಿಕ ಯುವತಿ ಗರ್ಭಿಣಿಯಾಗಿದ್ದಾಳೆ ಎಂಬ ಸತ್ಯ ಹೊರಬಂದಿತು…

ಕುಟುಂಬಕ್ಕೆ ಈ ವಿಷಯ ತಿಳಿದ ಕ್ಷಣ ಮನೆಲ್ಲೇ ಶಾಕ್ ವಾತಾವರಣ ನಿರ್ಮಾಣವಾಯಿತು. ಆದರೆ ಅಚ್ಚರಿಯ ಸಂಗತಿ ಏನೆಂದರೆ, ಯುವತಿಯ ತಾಯಿ ಅಸಾಧಾರಣ ನಿರ್ಧಾರ ಕೈಗೊಂಡಳು… ಮಗುವನ್ನು ನಾನು ಸಾಕುತ್ತೇನೆ… ನೀನು ಈ ವಿಷಯ ಮರೆತು ಜೀವನ ಮುಂದುವರಿಸು… ಆರಾಮವಾಗಿ ಮದುವೆಯಾಗು” ಎಂದು ಮಗಳಿಗೆ ಧೈರ್ಯ ತುಂಬಿದಳು… ಅದರಂತೆ ಯುವತಿ ಮಗುವಿಗೆ ಜನ್ಮ ನೀಡಿದಳು. ಎಲ್ಲವೂ ಮೌನವಾಗಿ ಮುಗಿದಂತೇ ಕಂಡಿತು. ಆದರೆ ಕಥೆ ಅಲ್ಲಿ ಮುಗಿಯಲಿಲ್ಲ…

ಮಗು ಹುಟ್ಟಿ ಐದು ತಿಂಗಳು ಕಳೆದ ಬಳಿಕ ಯುವತಿ ಏಕಾಏಕಿ ಕೆಲವರ ಬಳಿ ಹೋಗಿ, ನನಗೆ ಮಗು ಬೇಕು… ಎಂದು ಹೇಳಲು ಆರಂಭಿಸಿದ್ದಾಳೆ ಎನ್ನಲಾಗಿದೆ…

ಇದನ್ನು ಕೇಳಿದವರು ಗಾಬರಿಗೊಂಡಿದ್ದಾರೆ. ಇಲ್ಲಿಗೆ ಬಂದಾಗ ದೊಡ್ಡ ಪ್ರಶ್ನೆ ಏಳುತ್ತದೆ ಈಗಾಗಲೇ ಮಗುವಿಗೆ ಜನ್ಮ ನೀಡಿದ ಯುವತಿ ಮತ್ತೆ ನನಗೆ ಮಗು ಬೇಕು” ಎಂದು ಯಾಕೆ ಹೇಳುತ್ತಿದ್ದಾಳೆ..? ಇದರ ಜೊತೆಗೆ ಇನ್ನೊಂದು ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ ಆ ಮಗು ಈಗ ಎಲ್ಲಿದೆ..? ಮಗುವನ್ನು ಯಾರು ನೋಡಿಕೊಳ್ಳುತ್ತಿದ್ದಾರೆ..? ಅಥವಾ ಮಗು ಯಾರ ಬಳಿಯಿದೆ..? ಈ ಪ್ರಶ್ನೆಗಳೇ ಈಗ ಹುಬ್ಬಳ್ಳಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಪ್ರಕರಣದ ಹಿಂದಿನ ನಿಜವಾದ ಕಥೆ ಏನು..? ಇನ್ನೂ ಹೊರಬರದ ರಹಸ್ಯ ಏನಾದರೂ ಇದೆಯಾ..? ಒಟ್ಟಾರೆ… ಇದು ಸಾಮಾನ್ಯ ಘಟನೆ ಅಲ್ಲ, ಮನಸ್ಸೇ ನಡುಗಿಸುವ ದುರಂತ..!

Share News

About Shaikh BigTv

Check Also

ಕೊಲ್ಲೂರಿನಲ್ಲಿ 80 ಸಾವಿರ ರೂ. ಕಳವು: 24 ಗಂಟೆಯೊಳಗೆ ಮೂವರು ಕಳ್ಳಿಯರ ಬಂಧನ

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಕೊಲ್ಲೂರು …

Leave a Reply

Your email address will not be published. Required fields are marked *