ಬಿಷ್ಕೇಕ್: ಕಿರ್ಗಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶಾಂಘೈ ಸಹಕಾರ ಸಂಘದ ಶೃಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.
‘ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳನ್ನ ಬಯೋತ್ಪಾದಕರು ನಡೆಸುವ ಕೃತ್ಯಗಳಿಗೆ ಜವಾಬ್ದಾರರನ್ನಾಗಿ ಮಾಡಬೇಕು. ಕಳೆದ ಭಾನುವಾರ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದೆ. ಆ ವೇಳೆ ಅಲ್ಲಿನ ಸೆಂಟ್ ಅಂತೋನಿ ಚರ್ಚ್ಗೆ ಭೇಟಿ ನೀಡಿದ್ದೆ. ಆಗ ನನಗೆ ಆ ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡ ಬಯೋತ್ಪಾದಕರ ಕರಾಳ ಮುಖದ ದರ್ಶನವಾಯಿತು. ಭಯೋತ್ಪಾದನೆಯ ಭೀತಿಯನ್ನು ಎದುರಿಸಲು, ಅದರ ವಿರುದ್ಧ ಹೋರಾಡಲು ದೇಶಗಳು ತಮ್ಮ ಸಂಕುಚಿತ ವ್ಯಾಪ್ತಿಯಿಂದ ಹೊರಬರಬೇಕು. ಎಲ್ಲರೂ ಒಟ್ಟಿಗೆ ಹೋರಾಡಬೇಕು ಅಂತಾ ಪರೋಕ್ಷವಾಗಿ ಪಾಕ್ಗೆ ಟಾಂಗ್ ನೀಡಿದ್ರು. ಈ ವೇಳೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡಾ ಉಪಸ್ಥಿತರಿದ್ದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಎಸ್ಸಿಒ ಪಾತ್ರ ಮತ್ತು ವಿಶ್ವಾಸಾರ್ಹತೆಯನ್ನು ವೃದ್ಧಿಸುವ ಕೆಲಸ ಮಾಡಿದ್ದು, ಇದನ್ನೇ ಮುಂದುವರೆಸುವುದಾಗಿ ಹೇಳಿದ್ರು. ಅಲ್ಲದೇ ಭಯೋತ್ಪಾದನೆ ಕುರಿತು ಜಾಗತಿಕ ಸಮ್ಮೇಳನವನ್ನು ಆಯೋಜಿಸುವಂತೆ ಎಸ್ಸಿಒ ಮುಖಂಡರಿಗೆ ಒತ್ತಾಯಿಸಿದ್ರು.
bigtvnews | Hubli Dharwad News | Kannada News | Karnataka News Hubli News | News In Hubli | Local news





