ಜಿಂದಾಲ್ ವಿಚಾರದಲ್ಲಿ ಯಡಿಯೂರಪ್ಪನವರು 20 ಕೋಟಿ ಚೆಕ್ ಪಡೆದ್ದಿದ್ದನ್ನ ರಿಲೀಸ್ ಮಾಡಿದ್ದು ನಾನೇ ಎಂದು ಚನ್ನಪಟ್ಟಣದಲ್ಲಿ ಸಿಎಂ ಹೆಚ್ಡಿಕೆ ಬಿಜೆಪಿಗೆ ಟಾಂಗ್ ನೀಡಿದರು. ಆದರೆ ಇವತ್ತು ಅವರೇ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ನಾನು ಅವರಿಗೆ ಬನ್ನಿ ಚರ್ಚೆ ಮಾಡೋಣ ಎಂದಿದ್ದೆ, ಆದರೆ ಅವರು ಬಂದಿಲ್ಲ. ಹಾಗೂ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳ ಅಭಿವೃದ್ಧಿಗೆ ನಾನು ಬದ್ಧ. ಕೆಲವರು ಸರ್ಕಾರ ಈಗ ಬೀಳುತ್ತೆ, ನಾಳೆ ಬೀಳುತ್ತೆ ಎನ್ನುತ್ತಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಚುನಾವಣೆಗಳು ಬೇರೆ ಕಾರಣಗಳಿಂದಾಗಿ ಚನ್ನಪಟ್ಟಣಕ್ಕೆ ಬರಲಾಗಿಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನಗೆ ಗಮನವಿದೆ ಎಂದು ಸಿಎಂ ಹೆಚ್ಡಿಕೆ ಚನ್ನಪಟ್ಟಣದ ಇಗ್ಗಲೂರಿನಲ್ಲಿ ಹೇಳಿಕೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





