ರಾಜ್ಯ ರಾಜಧಾನಿಯಲ್ಲಿ ದಿನಕೊಂದು ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗ ಕೋಲಾರದ ಸರಧಿಯಾಗಿದ್ದು, ‘ ದಿ ಭಾರತ್ ಸೌಹಾರ್ದ
ಕ್ರೆಡಿಟ್ ಕೋ-ಆಪರೇಟಿವ್ ಲಿ. ಸಂಸ್ಥೆ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿದೆ.
ಹತ್ತು ಕೋಟಿ
ರುಪಾಯಿಗೂ ಹೆಚ್ಚು ವಂಚಿಸಿರುವ ದೋಖಾ ಕಂಪನಿ ದಿನಕ್ಕೆ ಒಂದು ಲಕ್ಷ
ರುಪಾಯಿಗೂ ಜಾಸ್ತಿ ಪಿಗ್ಮಿ ವಸೂಲಿ ಮಾಡುತ್ತಿತ್ತು. ಆದ್ರೇ
ಎರಡು ತಿಂಗಳಿಂದ ಸಂಸ್ಥೆಗೆ ಬೀಗ ಜಡಿದು ಪರಾರಿಯಾಗಿರುವ ಸಂಸ್ಥೆಯವರು ಗ್ರಾಹಕರಿಗೆ ಹೆದರಿ
ತಲೆ ಮರೆಸಿಕೊಂಡಿದ್ದಾರೆ. ಇದರಿಂದ ಹಣ ಕಳೆದುಕೊಂಡವರು ಕಂಪನಿಯ ಮುಂದೆ ಬಂದು ತಾವು ಹೂಡಿಕೆ ಮಾಡಿದ್ದ
ಹಣಕ್ಕಾಗಿ ಪ್ರತಿಭಟನೆ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





