ಮಂಡ್ಯ: ನವದೆಹಲಿಯಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನಾ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ ಮಂಡ್ಯ ಪಟ್ಟಣದ ರೈತವಿಜ್ಞಾನಿ ರೋಬೋ ಮಂಜೇಗೌಡ ಅವರಿಗೆ ಇಂದು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ನವದೆಹಲಿಯಲ್ಲಿ ಜುಲೈ17, 18,ಮತ್ತು 19ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಕೃಷಿ ಸಂಶೋಧಕರ ಸಮ್ಮೇಳನದಲ್ಲಿ ಭಾಗವಹಿಸಲು ಕೃಷ್ಣರಾಜಪೇಟೆ ತಾಲ್ಲೂಕಿನಿಂದ ಹೊರಡುತ್ತಿರುವ ರೈತ ವಿಜ್ಞಾನಿ ರೋಬೋ ಮಂಜೇಗೌಡರನ್ನು ಹಿತೈಷಿಗಳು ಮತ್ತು ಪ್ರಗತಿಪರ ಸಂಘ ಸಂಸ್ಥೆಗಳ ಮುಖಂಡರು ಅಭಿನಂದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು… ಮೂರು ದಿನಗಳ ಕಾಲ ನಡೆಯಲಿರುವ ಕೃಷಿ ಸಂಶೋಧಕರ ಸಮ್ಮೇಳನದಲ್ಲಿ ರೋಬೋ ಮಂಜೇಗೌಡರು ತಾವು ಸಂಶೋಧನೆ ಮಾಡಿರುವ ವಿದ್ಯುತ್ ರಹಿತ ವಾಟರ್ ಪಂಪ್, ಸಸಿಗಳನ್ನು ನೆಡುವ ಯಂತ್ರ ಮತ್ತು ಬೆಳೆಗಳಿಗೆ ನೀರು ನಿರ್ವಹಣೆ ಮಾಡುವ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಸಿ ಉಪನ್ಯಾಸವನ್ನು ನೀಡಲಿದ್ದಾರೆ…ರೋಬೋ ಮಂಜೇಗೌಡರನ್ನು ಪ್ರಗತಿಪರ ರೈತರಾದ ಕೆ.ಎಸ್.ಸೋಮಶೇಖರ್, ಪ್ರಗತಿಪರ ಚಿಂತಕ ಕತ್ತರಘಟ್ಟ ವಾಸು, ಶಿಕ್ಷಣತಜ್ಞ ಎಸ್.ಸಿ.ಕಿರಣಕುಮಾರ್, ಸಾಮಾಜಿಕ ಚಿಂತಕ ಕೆ.ಆರ್.ನೀಲಕಂಠ, ರೇಷ್ಮೆ ಇಲಾಖೆಯ ಅಧಿಕಾರಿ ದೊರೆಸ್ವಾಮಿ ಮತ್ತಿತರರು ಆತ್ಮೀಯವಾಗಿ ಬೀಳ್ಕೊಟ್ಟರು.
bigtvnews | Hubli Dharwad News | Kannada News | Karnataka News Hubli News | News In Hubli | Local news





