ಬೆಳಗಾವಿ: ಇಲ್ಲಿನ ಗ್ರಾಮೀಣ ಭಾಗದಲ್ಲಿ ಮಳೆ ನಿರಂತರ ಸುರಿಯುತ್ತಿರುವ ಕಾರಣ ಬಹುಭಾಗದಲ್ಲಿ ನೀರು ನಿಂತು ಜನಜೀವನ ಅಸ್ಥವ್ಯಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ರವರು ಇಂದು ಜಲಾವೃತಗೊಂಡ ಸ್ಥಳಗಳನ್ನು ಖುದ್ದು ಪರಿಶೀಲಿಸಿದರು. ಮತ್ತು ಅಗತ್ಯ ಸ್ಥಳಗಳಲ್ಲಿ ಗಂಜೀಕೇಂದ್ರಗಳನ್ನು ತೆರೆಯುವಂತೆ ಹಾಗೂ ತಾತ್ಕಾಲಿಕ ಪುನವ೯ಸತಿ ಕಲ್ಪಿಸುವಂತೆ ತಾಲೂಕು ಆಡಳಿತಾಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ಆಡಳಿತಾಧಿಕಾರಿಗಳು ಹಾಗೂ ತಾಲೂಕು ಆಡಳಿತಾಧಿಕಾರಿಗಳೊಂದಿಗೆ ತೆರಳಿ ನೆರೆ ಸಂತ್ರಸ್ಥರನ್ನು ಖುದ್ದು ಭೇಟಿಯಾದ ಶಾಸಕಿ ಲಕ್ಷ್ಮೀಹೆಬ್ಬಾಳಕರ್ ರವರು ನಿರಂತರ ಸುರಿಯುತ್ತಿರುವ ಮಳೆಯಲ್ಲಿಯೂ ಮಳೆಯಿಂದ ಜಲಾವೃತಗೊಂಡ ಕುಟುಂಬಗಳನ್ನು ಕಾಯ೯ಕತ೯ರೊಂದಿಗೆ ಹಾಗೂ ವಿವಿದ ಅಧಿಕಾರಿಗಳೊಂದಿಗೆ ಬೆಟ್ಟಿಕೊಟ್ಟು ಅವರನ್ನು ಸಂತೈಸಿದರು ಮತ್ತು ಮೂಲಭೂತ ಸೌಕಯ೯ಗಳನ್ನು ಸಂತ್ರಸ್ಥರಿಗೆ ಕೂಡಲೇ ವದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಅವರ ಕಾಳಜಿ ಹಾಗೂ ಕಥ೯ವ್ಯ ಪ್ರಜ್ಗ್ನೆಗೆ ಸಾವ೯ಜನಿಕ ವಲಯದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428.
bigtvnews | Hubli Dharwad News | Kannada News | Karnataka News Hubli News | News In Hubli | Local news





