Breaking News

ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದ ಇಬ್ಬರು ಮಹಿಳಾ ಭಕ್ತರ ಮೇಲೆ ಅಟ್ಯಾಕ್​..!

ನವದೆಹಲಿ: ಶಬರಿಮಲೈ ಅಯ್ಯಪ್ಪಸ್ವಾಮಿ ದರ್ಶನ ಪಡೆಯುವ ವಿಚಾರವಾಗಿ ಸುಪ್ರೀಂಕೋರ್ಟ್​​ ಐತಿಹಾಸಿಕ ತೀರ್ಪು ಹೊರಹಾಕಿದೆ. ಸುಪ್ರೀಂಕೋರ್ಟ್​​ ಆದೇಶದಂತೆ ಅಯ್ಯಪ್ಪಸ್ವಾಮಿ ದೇವಾಲಯವೂ ಮಹಿಳೆಯರಿಗೆ ದರ್ಶನ ನೀಡಲು ಬಾಗಿಲು ತೆರೆದಿದೆ. ಆದರೆ, ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಮಹಿಳಾ ಭಕ್ತರು ಶಬರಿಮಲೆಗೆ ಆಗಮಿಸಿಸುತ್ತಿದ್ದಾರೆ. ಆದರೆ, ಮಹಿಳಾ ಭಕ್ತರು ದೇವಸ್ಥಾನ ಪ್ರವೇಶಿಸದಂತೆ ಪ್ರತಿಭಟನಾಕಾರರು ತಡೆಯುತ್ತಿದ್ದಾರೆ.ಇಂದು ಕೂಡ ಆಂಧ್ರಪ್ರದೇಶ ಮೂಲದ ವಾಸಂತಿ (41) ಮತ್ತು ಆಧಿಶೇಷಿ (42) ಇಬ್ಬರು ಮಹಿಳೆಯರು ಪಂಬಾ ಕ್ಯಾಂಪ್​ನಿಂದ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಹೊರಟ್ಟಿದ್ದರು. ಕ್ಯಾಂಪ್​ನಿಂದ 100-200 ಮೀಟರ್​ ದೂರ ಸಾಗಿದ್ದರು. ದರ್ಶನ ಪಡೆಯಲು ಹೊರಟಿದ್ದ ಮಹಿಳೆಯರು 50 ವರ್ಷದೊಳಗಿನವರು ಎಂದು ಪ್ರತಿಭಟನಾಕಾರರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಮಹಿಳೆಯರನ್ನು ಪೊಲೀಸ್​​ ಸಿಬ್ಬಂದಿ ರೂಮ್​ಗೆ ವಾಪಸ್ಸು ಕಳುಹಿಸಲಾಗಿದೆ. ಬಳಿಕ ಗಾಯಗೊಂಡ ಮಹಿಳೆಯರನ್ನು ಪಂಬಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಇಬ್ಬರು ಮಹಿಳೆಯರು ಕೇರಳದ ವಿವಿಧ ದೇವಸ್ಥಾನಗಳನ್ನು ಭೇಟಿ ಮಾಡಿ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಬಂದಿದ್ದರು. ಆದರೆ, ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ವಾಸ್ತವದ ಪರಿಸ್ಥಿತಿಯನ್ನು ಅರಿತು ಮಧ್ಯದಲ್ಲೇ ಪೊಲೀಸರಿಗೆ ತಿಳಿಸಿ ಹಿಂದಕ್ಕೆ ಬಂದಿದ್ದರು.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *