ಗದಗ: ನರೇಂದ್ರ ಮೋದಿ ಸೋಲಿನ ಕೌಂಟ್ ಡೌನ್ ಈಗಿನಿಂದಲೇ ಆರಂಭವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲೋದೋ ಗ್ಯಾರಂಟಿ. ರಾಹುಲ್ ಗಾಂಧಿ ಪ್ರಧಾನಿ ಆಗೋದು ಗ್ಯಾರಂಟಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.ನಗರದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗಿದೆ ಇದೆನಾ ಅಚ್ಛೆದಿನ್ ಎಂದು ಕಿಡಿಕಾರಿದರು. ಅತೀ ಹೆಚ್ಚು ಸುಳ್ಳು ಹೇಳೋ ಪ್ರಧಾನಿ ಅಂದ್ರೆ ಅದು ಮಿಸ್ಟರ್ ಮೋದಿ. ನರೇಂದ್ರ ಮೋದಿ ಹಠಾವೋ ದೇಶ ಬಚಾವೋ, ಬಿಜೆಪಿ ಹಟಾವೋ ದೇಶ ಬಚಾವೋ ಎಂಬ ಘೋಷಣೆಯನ್ನ ಕೂಗಿ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರನ್ನ ಹುರಿದುಂಬಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





