ಚಾಕು ಇರಿದು 25 ಲಕ್ಷ ಹಣ ದೋಚಿ ಪರಾರಿಯಾದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದ ಸಂಜೀವಿನಿ ಆಸ್ಪತ್ರೆ ಹಿಂಭಾಗದ
ರಸ್ತೆಯಲ್ಲಿ ನಡೆದಿದೆ. ವಾಲಿಸಾಬ್ ಎಂಬುವವರು ಹೊಸದುರ್ಗ ದಿಂದ ಹಿರಿಯೂರಿಗೆ ಬಂದು ಮನೆಗೆ ಆಟೋದಲ್ಲಿ ಹೋದಾಗ ಮನೆ ಮುಂಭಾಗದಲ್ಲಿ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ದುರ್ಷ್ಕರ್ಮಿಗಳು ಚಾಕುವಿನಿಂದ ಇರಿದು ಬೈಕ್
ನಲ್ಲಿ ಪರಾರಿಯಾಗಿದ್ದಾರೆ. ರಾತ್ರಿ ಸುಮಾರು
8.10. ರಲ್ಲಿ ನೆಡೆದ ಘಟನೆಯಾಗಿದ್ದು, ಮೂರು ಜನರಿಂದ ಕೃತ್ಯ ನಡೆದಿದೆ. ಈ ಕುರಿತು ಬೈಕ್ ನಲ್ಲಿ ಎಸ್ಕೇಪ್ ಆದ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





