ಆನೇಕಲ್: ವೃದ್ಧರಿದ್ದ ಮನೆಗೆ ನುಗ್ಗಿದ ಇಬ್ಬರು ದರೊಡೆಕೋರು ದರೋಡೆ ತಡೆಯಲು ಬಂದ ವೃದ್ಧರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ. ಮುನಿರೆಡ್ಡಿ. ಜಯಮ್ಮ ಹಲ್ಲೆಗೊಳಗಾದ ವೃದ್ಧ ದಂಪತಿಯಾಗಿದ್ದು ಇಂದು ಸಂಜೆ 5 ಗಂಟೆ ವೇಳೆಗೆ ಮನೆಗೆ ನುಗ್ಗಿದ ಇಬ್ಬರು ಅಂಗುತಕರು ಮನೆಯಲ್ಲಿದ್ದ ವೃದ್ಧರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಜಯಮ್ಮ ತೀವ್ರವಾಗಿ ಗಾಯಗೊಂಡಿದ್ದರೆ ಇನ್ನು ದರೋಡೆಕೋರರು ದಂಪತಿಗೆ ತಿಳಿದವರೆ ಅಗಿರುವ ಸಾಧ್ಯತೆ ಇದ್ದು ಇಬ್ಬರೇ ಇರುವುದನ್ನು ಕಂಡು ದರೊಡೆಗೆ ಯತ್ನಿಸಿದ್ದಾರೆಂಬ ಸಂಶಯ ವ್ಯಕ್ತವಾಗಿದೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





