Breaking News

ಪುನೀತ್ ಭಾವಚಿತ್ರದ ಮೇಲಿನ ಧೂಳು ಒರೆಸಿ ಮುತ್ತಿಟ್ಟ ವೃದ್ಧೆ..

ಪುನೀತ್ ಭಾವಚಿತ್ರದ ಮೇಲಿನ ಧೂಳು ಒರೆಸಿ ಮುತ್ತಿಟ್ಟ ವೃದ್ಧೆ

ಕೊಪ್ಪಳ: ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ (Puneet rajkumar) ಅಕಾಲಿಕ ನಿಧನದಿಂದ ಕೋಟ್ಯಂತರ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಪುನೀತ್ ಭೌತಿಕವಾಗಿಲ್ಲದಿದ್ದರೂ ನಾನಾ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಬಸ್ ಮೇಲಿನ ಪುನೀತ್ ರಾಜಕುಮಾರ್​​ ಅವರ ಭಾವಚಿತ್ರಕ್ಕೆ ವೃದ್ಧೆಯೊಬ್ಬರು (Old women) ಮುತ್ತಿಟ್ಟು, ಸೆರಗಿನಿಂದ ಮುಖ ಸವರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​​ ವೈರಲ್ ಆಗಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿನ ಬಸ್ ಮೇಲಿನ ಜಾಹೀರಾತುವೊಂದರಲ್ಲಿ ಪುನೀತ್ ರಾಜ್​​ಕುಮಾರ ಅವರ ಭಾವಚಿತ್ರವಿದೆ. ಅಪ್ಪು ಭಾವಚಿತ್ರ ನೋಡಿದ ಅಜ್ಜಿಯೊಬ್ಬರು (Old women) ಭಾವುಕರಾಗಿ ಫೋಟೋಗೆ ಮುತ್ತಿಟ್ಟು, ಅದರ ಮೇಲಿನ ಧೂಳನ್ನು ಸೆರಗಿನಿಂದ ಒರೆಸಿ ಸ್ವಚ್ಚಗೊಳಿಸಿದ್ದಾರೆ.

ಈ ದೃಶ್ಯವನ್ನು ಸ್ಥಳೀಯರು ದೂರದಿಂದ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದು, ಎಂತಹವರನ್ನೂ ಮಮ್ಮಲ ಮರಗುವಂತೆ ಮಾಡುವಂತಿದೆ.

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *